ಬಿರುಗಾಳಿಗೆ ಅಡಿಕೆ ತೆಂಗು ನಾಶ :- ಪರಿಹಾರಕ್ಕಾಗಿ ರೈತರ ಆಗ್ರಹ - Vidyaranjaka

ಬಿರುಗಾಳಿಗೆ ಅಡಿಕೆ ತೆಂಗು ನಾಶ :- ಪರಿಹಾರಕ್ಕಾಗಿ ರೈತರ ಆಗ್ರಹ

ಗುಬ್ಬಿ:-ಮುಂಗಾರು ಪ್ರಾರಂಭದ ಬಿರುಗಾಳಿ ಆರ್ಭಟಕ್ಕೆ ಸಾವಿರಾರು ಅಡಿಕೆ ತೆಂಗಿನ ಮರಗಳು ಧರೆಗುರಳಿದ್ದಾವೆ ಹಾಗಾಗಿ ತೋಟಗಾರಿಕೆ ಇಲಾಖೆ ರೈತರಿಗೆ ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಆಗ್ರಹಿಸಿದ್ದಾರೆ..

 

 

 

ತಾಲೂಕಿನ ಅಮ್ಮನಘಟ್ಟ. ಜಿ ಹರವೇಸಂದ್ರ. ತಿಪ್ಪೂರು. ಚನ್ನಶೆಟ್ಟಿಹಳ್ಳಿ.ಗ್ರಾಮಗಳ ಸುತ್ತಮುತ್ತ ಅತಿ ಹೆಚ್ಚು ಅಡಿಕೆ ತೆಂಗಿನ ಮರಗಳು ಬಿರುಗಾಳಿಯ ರಭಸಕ್ಕೆ ಸಿಲುಕಿ ಸುಮಾರು ಸಾವಿರಾರು ಗಿಡಗಳು ಮುರಿದು ಧರೆಗುರಳಿವೆ ಆದುದರಿಂದ ತಾನು ಮಗನಂತೆ ಅಹೋರಾತ್ರಿ ನೀರು ಉಣಿಸಿ ಬೆಳೆಸಿದ್ದ ಮರಗಳನ್ನು ನೋಡಿ ರೈತರು ಕಂಗಾಲಾಗಿದ್ದಾರೆ. ಮಗನನ್ನೇ ಕಳೆದುಕೊಂಡಷ್ಟು ರೈತರಿಗೆ ದುಃಖವೆನಿಸುತ್ತಿದೆ ಹಾಗಾಗಿ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆ ಕೂಡಲೇ ನೊಂದ ಕುಟುಂಬಗಳಿಗೆ ದುಪ್ಪಟ ಪರಿಹಾರ ನೀಡುವಲ್ಲಿ ಮುಂದಾಗಬೇಕು..

 

 

 

ಒಂದು ಅಡಿಕೆ ಮತ್ತು ತೆಂಗಿನ ಸಸಿಗಳು ಒಂದು ವರ್ಷದಲ್ಲಿ ರೈತನ ಕುಟುಂಬವನ್ನು ಮುನ್ನಡೆಸುತ್ತವೆ ಅಂತಹ ಮರ-ಗಿಡಗಳನ್ನು ಕಳೆದುಕೊಂಡರೆ ನಾವು ಬದುಕುವುದು ಸಾಧ್ಯವಾಗುವುದಿಲ್ಲ ಹಾಗಾಗಿ ನಮಗೆ ಸರ್ಕಾರ ಮತ್ತು ತೋಟಗಾರಿಕಾ ಇಲಾಖೆ ಪರಿಹಾರ ನೀಡುವಲ್ಲಿ ಕೂಡಲೇ ಮುಂದಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

 

 

 

ಚನ್ನಶೆಟ್ಟಿಹಳ್ಳಿ.ಹರವೇಸಂದ್ರ. ಅಮ್ಮನಘಟ್ಟ. ತಿಪ್ಪೂರು. ಹಾಗೂ ಇತರೆ ಭಾಗಗಳಲ್ಲಿ ಅಡಿಕೆ.ತೆಂಗು ಜೊತೆಗೆ ಮನೆಯ ಮೇಲ್ಚಾವಣಿಗಳು ಬಿರುಗಾಳಿಯ ರಭಸಕ್ಕೆ ಗಾಳಿಯಲ್ಲಿ ತೂರಿ ಹೋಗಿರುವ ದೃಶ್ಯ ಕಂಡು ಬಂದಿದೆ ಒಂದು ಅಡಿಕೆ ಮತ್ತು ತೆಂಗಿನ ಗಿಡಕ್ಕೆ ಐದು ಸಾವಿರದಿಂದ ಹತ್ತು ಸಾವಿರ ಪರಿಹಾರವನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಗುಬ್ಬಿ ತಾಲೂಕು ಸಮಿತಿ ವತಿಯಿಂದ ಒತ್ತಾಯ ಮಾಡುತ್ತಿದ್ದಾರೆ.

 

 

 

ಪರಿಹಾರಕ್ಕಾಗಿ ಆಗ್ರಹಿಸುತ್ತಿರುವ ರೈತರು

ರೈತ ಸಂಘದ ಪ್ರಧಾನ ಕಾರ್ಯದರ್ಶಿ (ಚಿಕ್ಕೋನಹಳ್ಳಿ ಸಿ ಜಿ ಲೋಕೇಶ್).ಹಾಗೂ ರೈತ ಸಂಘ ಆಗ್ರಹಿಸುತ್ತಿದೆ.

 

 

 

(ವರದಿ:-ಸಂತೋಷ್ ಗುಬ್ಬಿ)

Leave a Reply

Your email address will not be published. Required fields are marked *

error: Content is protected !!