ಶ್ರಾವಣ ಮಾಸದ ಪಂಚಮಿ ದಿನದಂದು ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 2 ರಂದು ಮಂಗಳವಾರ ಆಚರಿಸಲಾಗುವುದು. ನಾಗರ ಪಂಚಮಿ ದಿನದಂದು ರಾಶಿಗನುಗುಣವಾಗಿ ಯಾವ ನಾಗ ಮಂತ್ರಗಳನ್ನು ಪಠಿಸಬೇಕು ಗೊತ್ತಾ..? ನಾಗ ದೇವರನ್ನು ಈ ರೀತಿ ಪೂಜಿಸಿ…
ನಾಗರ ಪಂಚಮಿ ಹಬ್ಬವು ಪ್ರತೀ ವರ್ಷವು ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ಪಂಚಾಂಗದ ಪ್ರಕಾರ, ನಾಗರ ಪಂಚಮಿ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಭಕ್ತರು ನಾಗ ದೇವತೆಯನ್ನು ಪೂಜಿಸುವುದರೊಂದಿಗೆ ಹಾಲಿನ ಅಭಿಷೇಕವನ್ನು ಮಾಡುತ್ತಾರೆ. ಇದರಿಂದ ನಾಗದೇವರು ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಪ್ರತಿಯೊಂದು ಇಷ್ಟಾರ್ಥಗಳನ್ನು ಈಡೇರಿಸುವಂತೆ ಅನುಗ್ರಹಿಸುತ್ತಾನೆ ಎಂಬುದು ಧಾರ್ಮಿಕ ನಂಬಿಕೆ.
ಭಕ್ತರು ತಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಮಂತ್ರಗಳಿಂದ ನಾಗದೇವತೆಯನ್ನು ಪೂಜಿಸಿದರೆ, ಮಂಗಳಕರ ಫಲಿತಾಂಶಗಳ ಪ್ರಾಪ್ತಿಯು ಹಲವಾರು ಪಟ್ಟು ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ. ನಾಗರ ಪಂಚಮಿಯಂದು ರಾಶಿಗನುಗುಣವಾಗಿ ಯಾವ ಮಂತ್ರಗಳನ್ನು ಪಠಿಸಬೇಕು..? ನಾಗರ ಪಂಚಮಿ ಹಬ್ಬದ ಪೂಜೆ ವಿಧಿ – ವಿಧಾನಗಳಾವುವು ನೋಡೋಣ..
*1. ನಾಗರ ಪಂಚಮಿಯಂದು ಹಾವನ್ನು ಏಕೆ ಪೂಜಿಸಬೇಕು..?*
ನಾಗದೇವತೆಯನ್ನು ಪೂಜಿಸುವ ಮೂಲಕ ನಾಗಪಂಚಮಿಯನ್ನು ಆಚರಿಸಲಾಗುತ್ತದೆ. ಇದನ್ನು ಮಾಡುವುದು ಮಂಗಳಕರವಾಗಿದೆ ಏಕೆಂದರೆ ಇದು ಜಾತಕದಲ್ಲಿನ ಕಾಳ ಸರ್ಪ ದೋಷದಿಂದ ಮುಕ್ತಿಯನ್ನು ನೀಡುತ್ತದೆ. ಇದರೊಂದಿಗೆ, ಈ ದಿನದಂದು ಅಗತ್ಯವಿರುವವರಿಗೆ ದಾನ ಮಾಡುವುದು ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
*2. ನಾಗರ ಪಂಚಮಿ ಪೂಜೆ ವಿಧಾನ*
– ದಿನ ನಿತ್ಯದ ಕೆಲಸ ಮಾಡಿದ ನಂತರ ಹಾವನ್ನು ಪೂಜಿಸುವ ಸ್ಥಳವನ್ನು ಸ್ವಚ್ಛಗೊಳಿಸಿ.
– ಪೂಜಾ ಸ್ಥಳದಲ್ಲಿ ಸರಿಯಾದ ದಿಕ್ಕಿನಲ್ಲಿ ಮರದ ಮಣೆಯನ್ನು ಇರಿಸಿ ಮತ್ತು ಅದರ ಮೇಲೆ ಕೆಂಪು ಬಟ್ಟೆಯನ್ನು ಹರಡಿ.
– ಅದರ ಮೇಲೆ ಒಂದು ತಟ್ಟೆಯನ್ನು ಇಟ್ಟು ಹಾವಿನ ಚಿತ್ರ, ಮಣ್ಣಿನ ಮೂರ್ತಿ ಅಥವಾ ಬೆಳ್ಳಿಯ ನಾಗರವನ್ನು ಇರಿಸಿ.
– ಈಗ ಚಿತ್ರ ಅಥವಾ ವಿಗ್ರಹದ ಮೇಲೆ ಗಂಗಾಜಲವನ್ನು ಸಿಂಪಡಿಸಿ, ಅಭಿಷೇಕವನ್ನು ಮಾಡಿ ಮತ್ತು ಅವರನ್ನು ಆಹ್ವಾನಿಸಿ.
– ನಂತರ ಅರಿಶಿನ, ರೋಲಿ (ಕೆಂಪು ಸಿಂಧೂರ), ಅಕ್ಕಿ ಮತ್ತು ಹೂವುಗಳನ್ನು ತೆಗೆದುಕೊಂಡು ಅದನ್ನು ನಾಗದೇವತೆಗೆ ಅರ್ಪಿಸಿ. ಪಂಚೋಪಚಾರ ಪೂಜೆ ಮಾಡಿ.
– ನಂತರ ಹಸಿ ಹಾಲು, ತುಪ್ಪ, ಸಕ್ಕರೆ ಬೆರೆಸಿ ನಾಗ ಮೂರ್ತಿಗೆ ಅರ್ಪಿಸಿ.
– ಪೂಜೆಯ ನಂತರ, ನಾಗದೇವತೆಯ ಆರತಿಯನ್ನು ಮಾಡಬೇಕು.
– ಪೂಜೆಯ ಕೊನೆಯಲ್ಲಿ, ನಾಗಪಂಚಮಿ ಕಥೆಯನ್ನು ಕಡ್ಡಾಯವಾಗಿ ಕೇಳಿ.
– ಅದೇ ರೀತಿ ಸಂಜೆಯೂ ಪೂಜೆ ಆರತಿ ಮಾಡಿ.
– ಪೂಜೆ ಆರತಿಯ ನಂತರ, ನೀವು ದಾನ ಇತ್ಯಾದಿಗಳನ್ನು ನೀಡಿ ಉಪವಾಸವನ್ನು ಮುರಿಯಬಹುದು.
*3. ರಾಶಿಚಕ್ರದ ಪ್ರಕಾರ ನಾಗ ಮಂತ್ರ*
ನಾಗ ಪಂಚಮಿಯ ದಿನ, ನಿಮ್ಮ ರಾಶಿಚಕ್ರದ ಪ್ರಕಾರ, ಮಂತ್ರಗಳ ಸಹಾಯದಿಂದ ನಾಗದೇವತೆಯನ್ನು ಪೂಜಿಸುವುದು ತುಂಬಾ ಮಂಗಳಕರವಾಗಿದೆ. ಹಾಗಾದರೆ, ನಮ್ಮ ರಾಶಿಗನುಗುಣವಾಗಿ ಯಾವ ನಾಗ ಮಂತ್ರಗಳನ್ನು ಪಠಿಸಬೇಕು ಗೊತ್ತಾ..?
– ಮೇಷ ರಾಶಿ: ಓಂ ಗಿರಿಯೇ ನಮಃ
– ವೃಷಭ ರಾಶಿ: ಓಂ ಭೂಧರ ನಮಃ
– ಮಿಥುನ ರಾಶಿ: ಓಂ ವ್ಯಾಲ ನಮಃ
– ಕರ್ಕ ರಾಶಿ: ಓಂ ಕಾಕೋದರ ನಮಃ
– ಸಿಂಹ ರಾಶಿ: ಓಂ ಸಾರಂಗ ನಮಃ
– ಕನ್ಯಾ ರಾಶಿ: ಓಂ ಭುಜಂಗ ನಮಃ
– ತುಲಾ ರಾಶಿ: ಓಂ ಮಹೀಧರ ನಮಃ
– ವೃಶ್ಚಿಕ ರಾಶಿ: ಓಂ ವಿಷಧರ ನಮಃ
– ಧನು ರಾಶಿ: ಓಂ ಅಹಿ ನಮಃ
– ಮಕರ ರಾಶಿ: ಓಂ ಅಚಲ ನಮಃ
– ಕುಂಭ ರಾಶಿ: ಓಂ ನಾಗಪತಿ ನಮಃ
– ಮೀನ ರಾಶಿ: ಓಂ ಶೈಲ ನಮಃ.
*4. ನಾಗಪಂಚಮಿ ಪೂಜೆಯ ಪ್ರಯೋಜನಗಳು:*
ಅನೇಕ ಪೌರಾಣಿಕ ಲೇಖನಗಳಲ್ಲಿಯೂ ನಾಗ ಪಂಚಮಿಯ ಪ್ರಸ್ತಾಪವಿದೆ. ದಂತಕಥೆಯ ಪ್ರಕಾರ, ಈ ದಿನದಂದು ನಾಗದೇವನನ್ನು ಪೂಜಿಸುವವನು ರಾಹು ಮತ್ತು ಕೇತುಗಳ ದುಷ್ಟ ಗ್ರಹಗಳಿಂದ ಬರುವ ಎಲ್ಲಾ ರೀತಿಯ ದುರದೃಷ್ಟಗಳಿಂದ ಪಾರಾಗುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕಾಳ ಸರ್ಪ ದೋಷದಿಂದ ಬಳಲುತ್ತಿರುವ ಯಾವುದೇ ವ್ಯಕ್ತಿಯು ಅದರ ಕೆಟ್ಟ ಪರಿಣಾಮಗಳನ್ನು ಸಹ ತೊಡೆದುಹಾಕಬಹುದು. ನಾಗಪಂಚಮಿಯ ದಿನದಂದು ಹಾವಿನ ಭಯವನ್ನು ಹೋಗಲಾಡಿಸುವ ಕಾಳಸರ್ಪ ಯೋಗವನ್ನು ಮಾಡಬಹುದು. ನಾಗ ಪಂಚಮಿಯ ದಿನದಂದು ಹಾವುಗಳನ್ನು ಪೂಜಿಸುವುದರಿಂದ ಜೀವನದ ತೊಂದರೆಗಳು ನಾಶವಾಗುತ್ತವೆ ಎಂಬುದು ಧಾರ್ಮಿಕ ನಂಬಿಕೆ. ಈ ದಿನ, ರಾಶಿಚಕ್ರದ ಪ್ರಕಾರ, ಮಂತ್ರಗಳ ಸಹಾಯದಿಂದ ಸರ್ಪಗಳನ್ನು ಪೂಜಿಸುವುದು ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತದೆ.
ನಾಗರ ಪಂಚಮಿ ದಿನದಂದು ಈ ಮೇಲಿನ ವಿಧಿ – ವಿಧಾನಗಳಂತೆ ನಾಗ ದೇವರನ್ನು ಪೂಜಿಸಬಹುದು ಮತ್ತು ರಾಶಿಗನುಗುಣವಾಗಿ ನಾಗ ದೇವರ ಆರಾಧನೆ ಮಾಡುವುದರಿಂದ ಕೂಡ ನಾಗದೇವತೆಗಳ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ನಾಗ ದೇವರ ಆರಾಧನೆ ಮಾಡುವುದರಿಂದ ನಾಗ ದೋಷ, ಕಾಳ ಸರ್ಪ ದೋಷದಿಂದ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆಯಿದೆ.