ನೇಗಲಾಲ ಸಿದ್ದೇಶನಿಗೆ ಒಲಿದ ಭಾರತ ಸೇವಾ ರತ್ನ ಪ್ರಶಸ್ತಿ

 

 

 

 

 

 

ತುಮಕೂರು : ತುಮಕೂರು ಜಿಲ್ಲೆಯ ಕೆ.ಟಿವಿ ಜಿಲ್ಲಾ ವರದಿಗಾರರು, ಸುದ್ಧಿ ಸಮಯ ಡಿಜಿಟಲ್ ಸಂಪಾದಕರು ಹಾಗೂ ಸ್ನೇಹಮಯಿ, ಸರಳ ಸಜ್ಜನಿಕೆ ವರದಿಗಾರರಾದ ಶ್ರೀಯುತ ಸಿದ್ದೇಶ್ ಎನ್.ಎಸ್. ಅವರು ತುಮಕೂರು ಜಿಲ್ಲೆಯಲ್ಲಿ ಕರುನಾಡ ಸಿಂಹ, ತುಮಕೂರು ಸಿಂಹ, ತೇಜಸ್ವಿನಿ ಪತ್ರಿಕೆ ಸೇರಿದಂತೆ ಹತ್ತು ಹಲವಾರು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ನಿರ್ವಹಣೆ ಮಾಡಿ ಪ್ರಸ್ತುತ ಕೆ.ಟಿವಿ ಕನ್ನಡ ವಾಹಿನಿಯ ತುಮಕೂರು ಜಿಲ್ಲಾ ವರದಿಗಾರರಾಗಿರುತ್ತಾರೆ.

 

 

 

 

 

ಸಿದ್ದೇಶ್ ಎನ್.ಎಸ್ (ನೇಗಲಾಲ ಸಿದ್ಧ) ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಕನ್ನಡ ಭವನದಲ್ಲಿ ದಿನಾಂಕ 22-08-2024ರಂದು ನೆಹರೂ ಯುವ ಕೇಂದ್ರ, ಬೆಂಗಳೂರು ನಗರ ಜಿಲ್ಲೆ, ಸ್ವಾನ್ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸಂಸ್ಥೆ (ರಿ.), ಸ್ವರ್ಣಮುಖಿ ಮಾಸ ಪತ್ರಿಕೆ, ಇಂದು ಸಂಜೆ ದಿನಪತ್ರಿಕೆ, ಎಸ್.ಬಿ.ನ್ಯೂಸ್ ಹಾಗೂ ವಿ.ನಾಗರಾಜು ಪ್ರತಿಷ್ಠಾನದ ವತಿಯಿಂದ 78ನೇ ಭಾರತದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ  ಭಾರತ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!