ಡಾ. ಜಿ ಪರಮೇಶ್ವರ್ ರವರನ್ನು ಅದ್ದೂರಿಯಾಗಿ ಬರಮಾಡಿಕೊಂಡ ತುಮಕೂರು ಜಿಲ್ಲಾ ಕಾಂಗ್ರೆಸ್‌

 

ತುಮಕೂರು – ಇತ್ತೀಚಿಗೆ ರಾಜ್ಯದಲ್ಲಿ ನೂತನವಾಗಿ ಕಾಂಗ್ರೆಸ್  ಸರ್ಕಾರವನ್ನು ರಚಿಸಲು ಹಗಲಿರುಳು ಶ್ರಮ ಹಾಕಿ ಪಕ್ಷದ ಗೆಲುವಿಗಾಗಿ ಶ್ರಮಿಸಿ  ಜಿಲ್ಲೆಯಲ್ಲಿ ಏಳು ಸ್ಥಾನಗಳನ್ನು ಗೆಲ್ಲಲು ಕಾರಣರಾದ ಡಾ. ಜಿ ಪರಮೇಶ್ವರ್ ಅವರು ನೂತನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ತುಮಕೂರಿಗೆ ಆಗಮಿಸಿದ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ನೀಡಲಾಯಿತು.

 

 

 

 

ಸೋಮವಾರ ಮಧ್ಯಾನ ತುಮಕೂರಿನ ಜಾಸ್ ಟೋಲ್ ಗೇಟ್ ಗೆ  ಆಗಮಿಸಿದ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರನ್ನು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ಆತ್ಮೀಯವಾಗಿ ಬರಮಾಡಿಕೊಂಡು ನಂತರ  ಬೈಕ್ ರಾಲಿ ಮೂಲತಃ ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕರೆತರಲಾಯಿತು.

 

 

 

 

 

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯನ್ನು  ಸಿಂಗಾರ ಮಾಡಿ ದ್ದ ಕಾಂಗ್ರೆಸ್ ನಾಯಕರನ್ನ ಕಂಡು ಡಾ. ಜಿ ಪರಮೇಶ್ವರ್ ಕಾಂಗ್ರೆಸ್ ನಾಯಕರನ್ನ ಹಾಗೂ ಕಾರ್ಯಕರ್ತರನ್ನ ಆತ್ಮೀಯವಾಗಿ ಅಭಿನಂದಿಸಿದರು.

 

 

 

 

 

ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ನೂತನ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಶ್ರಮ ಸಾಕಷ್ಟು ಇದೆ ಇವರೆಲ್ಲರ ಸಹಕಾರದಿಂದ ಜಿಲ್ಲೆಯಲ್ಲಿ 7 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿದೆ ಎಂದರು.

 

 

 

 

 

ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಪಾವಗಡ ಶಾಸಕ ಎಚ್‌.ವಿ ವೆಂಕಟೇಶ್ , ಮಾಜಿ ಶಾಸಕ ನಿಂಗಪ್ಪ ,ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ ,ಕಾಂಗ್ರೆಸ್ ವಕ್ತಾರ ಮುರುಳಿದರ ಹಾಲಪ್ಪ, ಕಾಂಗ್ರೆಸ್ ಮುಖಂಡರಾದ ಅತಿ ಅಹಮದ್, ಇಕ್ಬಾಲ್ ಅಹಮದ್ ಸರಿದಂತೆ ವಿವಿಧ ಘಟಕದ ಮುಖಂಡರು,ಪಕ್ಷದ  ಕಾರ್ಯಕರ್ತರು ಹಾಜರಿದ್ದರು  .

Leave a Reply

Your email address will not be published. Required fields are marked *

error: Content is protected !!