ಭಾಗ್ಯಗಳ ಸರದಾರನಿಗೆ ಮತ್ತೊಮ್ಮೆ ಒಲಿದ ಮುಖ್ಯಮಂತ್ರಿ ಪಟ್ಟ

ತುಮಕೂರು : 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 135 ಸೀಟುಗಳನ್ನು ಪಡೆದು ಸುಭದ್ರ ಸರ್ಕಾರ ರಚನೆಯಾಗುವಂತೆ ಜನಾದೇಶ ಹೊರ ಬಿದ್ದಿದೆ. ಅದರಂತೆ ಮುಖ್ಯಮಂತ್ರಿ ಸ್ಥಾನಕ್ಕೆ ತೀವ್ರತರವಾದ ಲಾಭಿ ಮತ್ತು ಪೈಪೋಟಿ ಮಾಡುತ್ತಿದ್ದ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ಧರಾಮಯ್ಯ ಇವರಿಬ್ಬರು ದೆಹಲಿ ಹೈ ಕಮಾಂಡ್‌ ನ ಮುಂದೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ತಮ್ಮ ಸಿ.ಎಂ. ಸ್ಥಾನಕ್ಕೆ ಟವಲ್‌ ಹಾಕಿದ್ದರು.

 

 

ಅದರಂತೆ ದೆಹಲಿ ಹೈಕಮಾಂಡ್‌ 2013ರ ಕಾಂಗ್ರೆಸ್‌ ಆಡಳಿತದಲ್ಲಿ ವಿವಿಧ ಭಾಗ್ಯಗಳನ್ನು ನೀಡಿದ ಸರದಾರ, ಭಾಗ್ಯಗಳ ವಿಧಾತ, ಅಹಿಂದ ನಾಯಕ, ಸಿದ್ಧರಾಮಯ್ಯರವರಿಗೆ 2ನೇ ಬಾರಿಗೆ ಮುಖ್ಯಮಂತ್ರಿ ಸ್ಥಾನವನ್ನು ಕರುಣಿಸಿದೆ.

 

 

ಇನ್ನು ನಾಳೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಬೃಹತ್‌ ವೇದಿಕೆಯೊಂದಿಗೆ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ

Leave a Reply

Your email address will not be published. Required fields are marked *

error: Content is protected !!