ಮೋದಿ ತುಮಕೂರಿಗೆ ಆಗಮನದ ಹಿನ್ನಲೆ ಕಮಲ ಪಕ್ಷ ಮತ್ತಷ್ಟು ಭಲಗೊಳ್ಳಲಿದೆ: ಹೆಬ್ಬಾಕ ರವಿಶಂಕರ್

ತುಮಕೂರು ನಗರಕ್ಕೆ ಪ್ರಧಾನಿ ಮೋದಿ ಅವರು ಮೇ 5 ರಂದು ಸಂಜೆ ಆಗಮನ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೆಬ್ಬಾಕ ರವಿಶಂಕರ್ ಕಾರ್ಯಕ್ರಮದ ರೂಪುರೆಷೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ನಡೆಸುತ್ತಿರುವುದಾಗಿ ತಿಳಿಸಿದರು.

 

 

 

 

ಮೋದೀಯಾ ಅವರು ತುಮಕೂರಿನ ವಿಶ್ವ ವಿದ್ಯಾನಿಲಯದ ಹೆಲಿಪ್ಯಾಡ್ ಗೆ ಸಂಜೆ 4:30 ರ ವೇಳೆಗೆ ಬರಳಿದ್ದು ಸಾರ್ವಜನಿಕರು ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಬಹಿರಂಗ ಸಮಾವೇಶದ ಸ್ಥಳಕ್ಕೆ ಮಧ್ಯಾಹ್ನ 2:30 ರೊಳಗೆ ಸೇರಬೇಕು ಇದು ಭದ್ರತೆಯ ಹಿತದೃಷ್ಟಿಯಿಂದ ಜನರು ಸಹಕರಿಸಬೇಕಾಗಿ ಮನವಿ ಮಾಡಿದರು.

 

 

 

ಮೋದಿ ಅವರ ಕಾರ್ಯಕ್ರಮವು ಬೃಹತ್ ಸಮಾವೇಶವನ್ನು ನಡೆಸಲಿದ್ದು ಈ ವೇದಿಕೆಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಹಾಜರಾಗುತ್ತಾರೆ ಅಲ್ಲದೆ ಈ ಸಂದರ್ಭದಲ್ಲಿ ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು.

 

 

 

ಪ್ರಧಾನಿಗಳ ಭಧ್ರತೆಯ ಹಿತದೃಷ್ಟಿಯಿಂದ ಕೆಲವು ನಿರ್ಬಂಧವಿದ್ದು ಸಕಲ ಭದ್ರತೆಯನ್ನು ಪೊಲೀಸ್ ಇಲಾಖೆ ನಿರ್ವಹಣೆ ಮಾಡಲಿದೆ ಎಂದರು.

 

 

 

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ರವಿಶಂಕರ್, ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!