ಬಟ್ಟೆ ಹೊಗೆಯಲು ಹೋದವರು ; ನೀರು ಪಾಲದ ಅತ್ತೆ-ಸೊಸೆ ತಿಪಟೂರು ನಡೆಯಿತು ವಿದ್ರಾವಕ ಘಟನೆ

ತಿಪಟೂರು -ಬಟ್ಟೆ ತೊಳೆಯಲು ತೆರಳಿದ್ದ ಅತ್ತೆ ಸೊಸೆ ಇಬ್ಬರು ಕಟ್ಟೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ತಿಪಟೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಚನಘಟ್ಟ ಬಳಿಯ ಹೊಸಕೆರೆಯಲ್ಲಿ ಘಟನೆ ನಡೆದಿದ್ದು.

 

 

 

 

ಬಹುಪಾಲು ಜನರು ಇದೇ ಕಟ್ಟೆಯನ್ನು ಬಟ್ಟೆ ತೊಳೆಯಲು ಬಳಸುತ್ತಿದ್ದು ಅದರಂತೆ ಬಟ್ಟೆ ತೊಳೆಯಲು ತೆರಳಿದ ತಿಪಟೂರಿನ ಮಂಜುನಾಥ ನಗರದ ನಿವಾಸಿಗಳಾದ ಅನುಸೂಯಮ್ಮ( 50 ) ಹಾಗೂ ಚಂದ್ರಿಕಾ( 25 )ವರ್ಷ ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ಮೃತಪಟ್ಟ ಮಹಿಳೆಯರು.

 

 

 

ಇನ್ನು ಇದೇ ಕೆರೆಯಲ್ಲಿ ಹಲವಾರು ವರ್ಷ ದಿಂದ ಸುಮಾರು 20 ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಇದೇ ಕಟ್ಟೆಯಲ್ಲಿ ಬಿದ್ದು ಮೃತಪಟ್ಟಿದ್ದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

 

 

 

 

ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು ಇದುವರೆಗೂ ಸಂಬಂಧ ಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಂಡು ಸೂಚನಾ ಫಲಕಗಳನ್ನು ಅಳವಡಿಸದೇ ಇರುವುದೇ ಘಟನೆಗೆ ಕಾರಣವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Leave a Reply

Your email address will not be published. Required fields are marked *

error: Content is protected !!