ತಂದೆಯ ಆದರ್ಶದಂತೆ ನಡೆಯುತ್ತಿರುವ ಶಾಸಕ ಡಿ.ಸಿ.ಗೌರಿಶಂಕರ್

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಊರುಕೆರೆ ಗ್ರಾಮದಲ್ಲಿ ಮಾಜಿ ಸಚಿವರು, ಕೊಡುಗೈ ದಾನಿಗಳು ದಿವಂಗತ ಸಿ.ಚೆನ್ನಿಗಪ್ಪರವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

 

 

 

 

ಈ ಸಂದರ್ಭದಲ್ಲಿ ಬೆಳಗುಂಬ ಜಿಲ್ಲಾ ಪಂಚಾಯತ್‌ ಜೆಡಿಎಸ್‌ ಉಸ್ತುವಾರಿಗಳಾದ ಹರೀಶ್‌ ರವರು ಮಾತನಾಡುತ್ತಾ ಸಿ.ಚೆನ್ನಿಗಪ್ಪ ರವರು ತಮ್ಮ ಜೀವಿತಾವಧಿಯಲ್ಲಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಆದರ್ಶಗಳನ್ನು ಪಾಲಿಸುವಂತ ವ್ಯಕ್ತಿಯಾಗಿದ್ದರು, ಚೆನ್ನಿಗಪ್ಪರವರು ಸಹ  ಪ್ರತಿನಿತ್ಯ ನೂರಾರು ಜನರಿಗೆ ಅನ್ನ ದಾಸೋಹವನ್ನು ಮಾಡುತ್ತಿದ್ದರು, ತಮ್ಮ ಮನೆ ಬಾಗಿಲಿಗೆ ಸಹಾಯ ಬೇಡಿ ಬಂದವರಿಗೆ ಎಂದಿಗೂ ಇಲ್ಲ ಎನ್ನದಂತೆ ತಮಗೆ ಕೈಲಾದ ಸಹಾಯವನ್ನು ಮಾಡಿಕೊಂಡು ಬರುತ್ತಿದ್ದಂತಹ ವ್ಯಕ್ತಿ.

 

 

 

 

ತಂದೆಯ ಆದರ್ಶಗಳನ್ನು ಅವರ ಅಗಲಿಕೆಯ ನಂತರವೂ ನಿತ್ಯ ಪಾಲಿಸಿಕೊಂಡು ಬರುತ್ತಿದ್ದಾರೆ ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್‌ ಎಂದು ಬೆಳಗುಂಬ ಜಿಲ್ಲಾ ಪಂಚಾಯತ್‌ ಉಸ್ತುವಾರಿಗಳಾದ ಹರೀಶ್‌ ರವರು ಮಾತನಾಡಿದರು. ಜೊತೆಗೆ ಅವರ ಹುಟ್ಟು ಹಬ್ಬದ ಅಂಗವಾಗಿ ಊರುಕೆರೆಯ ಆಟೋ ಸರ್ಕಲ್‌ನಲ್ಲಿ ದಾಸೋಹ ಮಾಡುವುದರೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

 

 

 

 

ಈ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡರುಗಳಾದ ಹರೀಶ್‌, ರಘು ಡಿ, ಉಮೇಶ್‌, ಅನಿಲ್‌ ನಾಯಕ್‌,ರಾಜಣ್ಣ, ಮಣಿ, ಕುಮಾರ್‌ ವೆಂಕಟೇಶ್‌, ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!