ತುಮಕೂರು : ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಅಮೋಘ ಸಾಧನೆಯನ್ನು ಗುರುತಿಸಿದ ಪೂರ್ವ ಆಫ್ರಿಕಾ ದೇಶದ ಮಲಾವಿ ಸೆಂಟ್ರಲ್ ಕ್ರಿಶ್ಚಿಯನ್ ಯೂನಿವರ್ಸಿಟಿಯು ವಿದ್ವಾನ್ ಶೇಷಾದ್ರಿ ಬಿ.ಎಸ್ ರವರಿಗೆ ಇಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ವಿದ್ವಾನ್ ಶೇಷಾದ್ರಿರವರು ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕಿನ ಕಡಬ ಗ್ರಾಮದ ನಿವಾಸಿಯಾಗಿದ್ದು,
ಪ್ರಸ್ತುತ ಕೊರಟಗೆರೆ ತಾಲ್ಲೂಕಿನ ಎಲೆರಾಂಪುರದಲ್ಲಿರುವ ಕುಂಚಿಟಿಗ ಮಹಾಸಂಸ್ಥಾನ ಮಠದ ವತಿಯಿಂದ ನಡೆಯುತ್ತಿರುವ ಸದ್ವಿದ್ಯಾ ಸಂಸ್ಕೃತ ಪಾಠಶಾಲೆ ಮತ್ತು ಶ್ರೀ ಲಕ್ಷ್ಮೀನರಸಿಂಹ ವೇದ-ಆಗಮ ಪಾಠಶಾಲೆಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಇವರಿಂದ ವಿದ್ಯಾರ್ಜನೆ ಪಡೆದ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶದ ನಾನಾ ರಾಜ್ಯಗಳಲ್ಲಿ ಉನ್ನತ ಸ್ಥಾನದ ಅಧಿಕಾರಿಗಳಿಗೆ, ಹಲವಾರು ಜನ ಸಮಾಜ ಸೇವಕರಾಗಿ, ಕೆಲವರು ರಾಜಕಾರಣಿಗಳಾಗಿ ಸೇರಿದಂತೆ ಇಂದಿಗೂ ನೂರಾರು ಜನ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ವಿದ್ಯಾರ್ಜನೆಯನ್ನು ಮಾಡುತ್ತಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿದ ಆಫ್ರಿಕಾ ದೇಶವು ಗೌರವ ಡಾಕ್ಟರೇಟ್ ನೀಡಿರುವುದು ನಮಗೆ ಸಂತೋಷದ ಸಂಗತಿ ಎಂದು ಅವರ ವಿದ್ಯಾರ್ಥಿ ಬಳಗದವರು ಹರ್ಷ ವ್ಯಕ್ತಪಡಿಸಿದ್ದಾರೆ.