ಗುಬ್ಬಿ:- ಕೇಶಿಪ್ ರಸ್ತೆಯಲ್ಲಿ ಟೋಲ್ ನಿರ್ಮಿಸಲು ಮುಂದಾಗಿರುವುದನ್ನು ಖಂಡಿಸಿ ರೈತ ಸಂಘ ಹಾಗೂ ದಿನನಿತ್ಯ ಸಂಚರಿಸುವ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಗುಬ್ಬಿ ಯಿಂದ ಯಡಿಯೂರು ಸಂಪರ್ಕ ಕಲ್ಪಿಸುವ ಜಿ.ಹೋಸಹಳ್ಳಿ ಸಮೀಪದ ಕೆಶೀಪ್ ರಸ್ತೆಯಲ್ಲಿ ಟೋಲ್ ನಿರ್ಮಿಸಲು ಮುಂದಾಗಿರುವುದನ್ನು ಖಂಡಿಸಿ ರೈತ ಸಂಘ ಬೇಸರ ವ್ಯಕ್ತಪಡಿಸಿದ್ದಾರೆ.
ರೈತ ಸಂಘದ ಪ್ರಧಾನ ಕಾರ್ಯದರ್ಶಿ:- *ಲೋಕೇಶ್ ಮಾತನಾಡಿ ಗುಬ್ಬಿ – ಯಡಿಯೂರು ರಸ್ತೆಗೆ ಟೋಲ್ ನಿರ್ಮಿಸುವುದರಿಂದ ರೈತರಿಗೆ ನಷ್ಟವಾಗುತ್ತದೆ.ಈ ಕೆಶೀಪ್ ರಸ್ತೆಯನ್ನು ಅಗಲೀಕರಣ ಮಾಡಿ ಅಪಘಾತಗಳನ್ನು ತಪ್ಪಿಸಲು ಸರ್ಕಾರ ಮತ್ತು ಅಧಿಕಾರಗಳು ಮುಂದಾಗಬೇಕು. ಏಕಾಏಕಿಯಾಗಿ ಟೋಲ್ ನಿರ್ಮಿಸಲು ಮುಂದಾಗಿರುವುದು ಸಾರ್ವಜನಿಕರ ಕಣ್ಣಿಗೆ ಗುರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಗ್ರಾಮಸ್ಥರಾದ ಪಾಪಣ್ಣ ಮಾತನಾಡಿ ರಸ್ತೆ ಅಗಲೀಕರಣ ಹಾಗೂ ಅಪಘಾತಗಳನ್ನು ತಪ್ಪಿಸುವಲ್ಲಿ ಅಧಿಕಾರಿಗಳು ಹೆಚ್ಚುತ್ತುಕೊಳ್ಳಿ, ಜೊತೆಗೆ ರಸ್ತೆ ಪಕ್ಕದಲ್ಲಿ ವಿಶ್ರಾಂತಿ ಸ್ಥಳವನ್ನು ಗುರುತಿಸಿ ರಸ್ತೆ ನಿರ್ಮಿಸಿ, ಅದೇ ರೀತಿ ಈ ಕೆಶೀಪ್ ರಸ್ತೆಯಲ್ಲಿ ಯಾವುದೇ ರೀತಿ ಬೃಹತ್ ಗಾತ್ರದ ವಾಹನಗಳು ಸಂಚರಿಸುವುದಿಲ್ಲ ಹಾಗೂ ಸ್ಥಳೀಯ ಖಾಸಗಿ ವಾಹನಗಳು ರೈತರು ಸಂಚರಿಸಲು ಈ ರಸ್ತೆ ಅವಶ್ಯಕತೆ ಇದ್ದು ಈ ರಸ್ತೆಗೆ ಸುಂಕ ವಸೂಲಿ ಮಾಡಲು ಮುಂದಾಗಿರುವುದು ಈ ಭಾಗದ ರೈತರ ಆಕ್ರೋಶಕ್ಕೆ ಗುರಿಯಾಗಿದೆ. ಶಾಲಾ ಕಾಲೇಜುಗಳು ಹಾಗೂ ರಸ್ತೆ ತಿರುವು ಭಾಗಗಳಲ್ಲಿ ರಸ್ತೆ ಉಬ್ಬು ನಿರ್ಮಿಸುವುದು ಹಾಗೂ ಬ್ಯಾರಿಕೆಡ್ ಅಳವಡಿಸಲು ಮುಂದಾಗಬೇಕು ಎಂದರು.
ರೈತ ಸಂಘದ ಮುಖಂಡ ಯತೀಶ್ ಮಾತನಾಡಿ ಈ ರಸ್ತೆಯಲ್ಲಿ ಕೆ.ಎಸ್.ಆರ್.ಟಿ .ಸಿ ಬಸ್ ಹಾಗೂ ರೈತರ ವಾಹನಗಳು ಹೊರತುಪಡಿಸಿ ಬೃಹತ್ ಗಾತ್ರದ ಯಾವುದೇ ವಾಹನಗಳು ಸಂಚರಿಸುವುದಿಲ್ಲ ಹಾಗಾಗಿ ಟೋಲ್ ನಿರ್ಮಿಸಲು ಮುಂದಾಗಿರುವುದು ಸೂಕ್ತವಲ್ಲ ಎಂದರು.
ಇದೇ ಸಂದರ್ಭದಲ್ಲಿ ಯತೀಶ್,ರವಿಶ್, ಚನ್ನಿಗಪ್ಪ, ಕನ್ನಿಗಪ್ಪ,ನಲ್ಲೂರಯ್ಯ, ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಹಾಜರಿದ್ದರು