ತುಮಕೂರು:ಕಳೆದ 15 ವರ್ಷಗಳಿಂದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅಕ್ಷಯ ಇನ್ಸಿಟ್ಯೂಟ್ ಅಫ್ ಟೆಕ್ನಾಲಜಿಗೆ ಎನ್.ಬಿ.ಎ(ನ್ಯಾಷನಲ್ ಬೋರ್ಡ ಅಫ್ ಅಕ್ರಿಡೇಷನ್) ಮಾನ್ಯತೆ ಲಭಿಸಿದ್ದು, ಎನ್.ಬಿ.ಎ ಮಾನ್ಯತೆ ಪಡೆದ ಅತ್ಯಂತ ಕಿರಿಯ ವಯಸ್ಸಿನ ನಾನ್ ಅಟಾನಮಸ್ ಕಾಲೇಜಾಗಿದೆ ಎಂದು ಅಕ್ಷಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ವಿ.ಶ್ರೀನಿವಾಸ್ ರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2025ನೇ ಮೇ.11,12 ಮತ್ತು 13 ರಂದು ಕಾಲೇಜಿಗೆ ಭೇಟಿ ನೀಡಿದ್ದ ಎನ್.ಬಿ.ಎ ತಂಡ ಹತ್ತು ಮಾನದಂಡಗಳ ಆಧಾರದಲ್ಲಿ ಕಾಲೇಜಿನ ಬೌತಿಕ ಮತ್ತು ಬೌದ್ದಿಕ ವಿಚಾರಗಳನ್ನು ಪರಿಶೀಲಿಸಿ, ಗುಣಮಟ್ಟದ ಶಿಕ್ಷಣ,ಸಂಶೋಧನೆ,ವಿದ್ಯಾರ್ಥಿಗಳ ಪ್ರವೇಶ ಎಲ್ಲವನ್ನು ಪರಿಗಣಿಸಿ, ಮೇ.28 ರಂದು ಬಿಡುಗಡೆ ಮಾಡಲಾದ ಎನ್.ಬಿ.ಎ ಮಾನ್ಯತಾ ಪಟ್ಟಿಯಲ್ಲಿ ಅಕ್ಷಯ ಇಂಜಿನಿಯರಿಂಗ್ ಕಾಲೇಜಿನ ಹೆಸರು ಇರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಅಕ್ಷಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಳೆದ ಒಂದು ವರ್ಷದಿಂದ ನಮ್ಮ ಕಾಲೇಜಿನ ಡೀನ್ ಮತ್ತು ಸಂಯೋಜಕರಾದ ಡಾ.ಯತೀಶ್ ಅವರ ನೇತೃತ್ವದಲ್ಲಿ ಎನ್.ಬಿ.ಎಗೆ ಬೇಕಾದ ಎಲ್ಲಾ ಮಾನದಂಡಗಳನ್ನು ಅನುಸರಿಸಿದ ಪರಿಣಾಮ,ಇದು ಲಭ್ಯವಾಗಿದೆ.ಇದರಿಂದ ನಮ್ಮ ಕಾಲೇಜಿನಲ್ಲಿ ಕಲಿತ ವಿಧ್ಯಾರ್ಥಿಯ ಸರ್ಟಿಪಿಕೇಟ್ಗೆ ವಿಶ್ವದಲ್ಲಿಯೇ ಮಾನ್ಯತೆ ದೊರೆಯಲಿದೆ.ಇದು ಕ್ಯಾಂಪಸ್ ಸೆಲೆಕ್ಷನ್, ಪ್ಲೇಸ್ಮೆಂಟ್ಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಡಾ.ಕೆ.ವಿ.ಶ್ರೀನಿವಾಸ್ ರಾವ್ ತಿಳಿಸಿದರು.
ಆಕ್ಷಯ ಇಂಜಿನಿಯರಿಂಗ್ ಕಾಲೇಜಿನ ಡೀನ್ ಹಾಗೂ ಎನ್.ಬಿ.ಎ ಚೀಪ್ ಕೋ ಅಡಿನೇಟರ್ ಡಾ.ಯತೀಶ್ ಮಾತನಾಡಿ,ಕೇಂದ್ರ ಸರಕಾರ ಹೊರಡಿಸಿದ ಮಾನದಂಡದ ಪ್ರಕಾರ ವಿದೇಶಗಳಲ್ಲಿ ಎನ್.ಬಿ.ಎ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಉದ್ಯೋಗಕ್ಕೆ ಅವಕಾಶವಿದೆ.ಹಾಗಾಗಿ ಇನ್ನೂ ಮುಂದೆ ಅಕ್ಷಯ ಇಂಜಿನಿಯರಿಂಗ್ ಕಾಲೇಜಿನ ಸರ್ಟಿಪಿಕೇಟ್ಗೆ ವಿದೇಶಗಳಲ್ಲಿಯೂ ಮಾನ್ಯತೆ ದೊರೆಯಲಿದೆ.ಅಲ್ಲದೆ ನಮ್ಮ ಕ್ಯಾಂಪಸ್ ಇಂಟರವ್ಯೂ, ಪ್ಲೇಸ್ಪೆಂಟ್ ಸೆಲ್ನಲ್ಲಿಯೂ ಹೆಸರು ಮಾಡಿರುವ ಕಂಪನಿಗಳು ಭಾಗವಹಿಸಲು ಮುಂದಾಗಲಿವೆ. ಇದರಿಂದ ನಮ್ಮ ವಿದ್ಯಾರ್ತಿಗಳಿಗೆ ವಲ್ರ್ಡ್ ವೈಡ್ ಉದ್ಯೋಗಾವಕಾಶ ಲಭ್ಯವಾಗಲಿದೆ.ಅಲ್ಲದೆ ಬೋಧಕ ಸಿಬ್ಬಂದಿ ಸಹ ಸಂಶೋಧನೆ ಕೈಗೊಳ್ಳಲು ಸರಕಾರದ ಧನ ಸಹಾಯ ಸಹ ಲಭ್ಯವಾಗಲಿದೆ ಎಂದರು.
ಎನ್.ಬಿ.ಎ ಮಾನದಂಡಗಳಲ್ಲಿ ಕಾಲೇಜಿನ ಗುರಿ, ಭೋಧನೆ, ಕಲಿಕೆ, ಹೊಸ ಪ್ರಯೋಗಾಲಯ ಮತ್ತು ಅದರ ಬಳಕೆ, ಪ್ರಾಜೆಕ್ಟ್, ವಿದ್ಯಾರ್ಥಿಗಳ ತೊಡಗಿಕೊಳ್ಳುವುದು.ವಿದ್ಯಾರ್ಥಿಗಳ ಪ್ರವೇಶ, ಪರೀಕ್ಷೆ ಮತ್ತು ತೇರ್ಗಡೆ, ನುರಿತ ಬೋಧಕ ಸಿಬ್ಬಂದಿ, ಪಠ್ಯೇತರ ಚಟುವಟಿಕೆ, ಹಣಕಾಸಿನ ಸ್ಥಿರತೆ ಮುಂತಾದ ವಿಚಾರಗಳಲ್ಲಿ ಪರಿಶೀಲನೆ ನಡೆಸಲಿದ್ದು, ಪ್ರತಿ ವಿಷಯಕ್ಕೆ 100 ಅಂಕಗಳಿದ್ದು, ಕನಿಷ್ಠ 60 ರಷ್ಟು ಅಂಕ ಪಡೆದರೆ ಮಾತ್ರ ಎನ್.ಬಿ.ಎ ಮಾನ್ಯತೆ ಲಭ್ಯವಾಗಲಿದೆ.ನಮ್ಮ ಕಾಲೇಜು ಶೇ60ಕ್ಕಿಂತಲೂ ಹೆಚ್ಚು ಅಂಕ ಪಡೆದು ಎನ್.ಬಿ.ಎ ಮಾನ್ಯತೆಗೆ ಆರ್ಹವಾಗಿದೆ ಎಂಬುದು ಸಂತೋಷದ ವಿಚಾರವಾಗಿದೆ.ಕಳೆದ 15 ವರ್ಷಗಳಿಂದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವ ಅಕ್ಷಯ ಇಂಜಿನಿಯರಿಂಗ್ ಕಾಲೇಜು,ಇದುವರೆಗೆ ಎಐಸಿಟಿಇ ಸಹಕಾರದಲ್ಲಿ ಎರಡು ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸಿದೆ.2025ನೇ ವರ್ಷದ ಜೂನ್ 19 ಮತ್ತು 20 ರಂದು ಮತ್ತೊಂದು ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.ಅಲ್ಲದೆ ನ್ಯಾಕ್ ಮಾನ್ಯತೆಗೂ ಕ್ರಮ ವಹಿಸಲಾಗುತ್ತಿದೆ ಎಂದು ಡಾ.ಯತೀಶ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ಪುಷ್ಪ, ಆರ್., ವಿಭಾಗದ ಸಂಯೋಜಕರಾದ ಪ್ರೊ.ರಾಕೇಶ್,ಎಸ್, ಪ್ರೊ.ಕೀರ್ತಿಶ್ರೀ.ಪಿ.ವಿ, ಡಾ.ಸುಹಾಸ್, ಡಾ.ಪ್ರದೀಪ್, ಅಶ್ವಿನಿ ಸಿಂಗ್, ಡಾ.ತೃಪ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.