ಪಾವಗಡದ. ಸೋಮವಾರ ಶ್ರೀನಿವಾಸನಗರದಲ್ಲಿರುವ ವಿವೇಕಾನಂದ ಒಕ್ಕೂಟದ ಕಚೇರಿ ಶಾರದಾ ವಿದ್ಯಾಪೀಠ ಕಿರಿಯ ಪ್ರಾಥಮಿಕ ಶಾಲೆ ಬಳಿ ತೀವ್ರತರ ವಿಕಲಚೇತನರಿಗೆ ಸಾಧನ ಸಲಕರಣೆಗಳ ಜೋಡಣ ಶಿಬಿರ ಮೊಬಿಲಿಟಿ ಇಂಡಿಯಾ ಬೆಂಗಳೂರು ಡಿಎನ್ಎ ರಾಜ್ಯ ಸಂಘ ಸಂಸ್ಥೆಗಳ ಒಕ್ಕೂಟ ನರೇಂದ್ರ ಫೌಂಡೇಶನ್ ಸಿದ್ದಾಪುರ ಮತ್ತು ಪುನರ್ವಸ್ಥಿ ಕಾರ್ಯಕರ್ತರ ಸಹಯೋಗದಲ್ಲಿ 43 ವಿಕಲಚೇತನರಿಗೆ ಒಟ್ಟು 59 ಸಲಕರಣೆಗಳನ್ನು ವಿತರಿಸಿ ರಾಜ್ಯ ಅಂಗವಿಕಲ ಒಕ್ಕೂಟದ ಅಧ್ಯಕ್ಷ ಕೆ. ವಿ.ಸುಧೀಂದ್ರ ಮಾತನಾಡಿ.

ಈ ಶಿಬಿರದಲ್ಲಿ ವ್ಯಕ್ತಿಗಳ ಅಗತ್ಯವಿರುವ ಸಲಕರಣೆಗಳ ಅಳತೆಯನ್ನು ಫೆಬ್ರವರಿ 2020 ರಂದು ತೆಗೆದುಕೊಳ್ಳಲಾಗಿತ್ತು ಈ ಸಹಾಯಕ ಉಪಕರಣಗಳ ಅಂದಾಜು ಮೊತ್ತ ಹನ್ನೆರಡು ಲಕ್ಷಗಳು ಇದನ್ನು ವ್ಯವಸ್ಥ ಮಾಡಿಕೊಟ್ಟ ಮೊಬಿಲಿಟಿ ಇಂಡಿಯಾ ಮತ್ತು ಡಿಎನ್ಎ ಒಕ್ಕೂಟಕ್ಕೆ ಧನ್ಯವಾದಗಳನ್ನು ತಿಳಿಸಿದರು. ಈ ಶಿಬಿರದಲ್ಲಿ ಸಂಜಯ್ ಸಿಂಗ್ ನೇತೃತ್ವದಲ್ಲಿ 13 ಜನರು ಕಾರ್ಯನಿರ್ವಹಿಸಿದರು.

ಎಮ್ ಆರ್ ಡಬ್ಲ್ಯೂ ಮೈಲಾರಪ್ಪ ಮತ್ತು ಅವರ ಆಯುಧ ಬಿ ಡಬ್ಲ್ಯೂ ಸಹಕರಿಸಿದರು ನರೇಂದ್ರ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ರಾಜ್ಯದ ಕೆ. ವಿ.ರಾಜಣ್ಣ ಹಾಗೆಯೇ ಮತ್ತೊಬ್ಬ ಮಾಜಿ ಆಯುಕ್ತರಾದ ವಿ ಎಸ್.ಬಸವರಾಜ್ ರವರು ಶಿಬಿರದಲ್ಲಿ ಇದ್ದು ಮಾರ್ಗ ಕನ್ನಡಿಗರು ಡಿ.ಎನ್.ಎ. ಸಂಘ-ಸಂಸ್ಥೆಗಳ ಒಕ್ಕೂಟದಿಂದ ಸವಿತಾ ಬಸವರಾಜ,ಹಾಗೂ ಶ್ರೀಮತಿ ಅರುಣ, ತಾಲೂಕ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಮಧುಸೂದನ್ ಭೇಟಿ ನೀಡಿ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ತಿಳಿಸಿದರು.

ಅಲ್ಲದೆ ಈ ರೀತಿಯ ಶಿಬಿರಗಳಿಗೆ ಮತ್ತು ಅಗತ್ಯತೆಗಳಿಗೆ ತಿಳಿಸಿ ತಾಲೂಕು ಮಟ್ಟದಲ್ಲಿ ರಚನೆಯಾಗಿರುವ ತಾಲೂಕು ಅನುಷ್ಠಾನ ಸಮಿತಿ ಸಭೆಯನ್ನು ಕರೆದು ತುತ್ತಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಕೊತ್ತೂರು ಪ್ರಭಾಕರ್ ರವರು ಗುರುಕುಲ ಶಾಲೆಯ ಮುಖ್ಯಸ್ಥರಾದ ಶ ನಾಗಭೂಷಣ್ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಪತಂಜಲಿ ಬ್ಯಾಂಕ್ ನ ವಿಜಯಕುಮಾರ್ ಹಾಜರಿದ್ದರು.
ಸುಮಾರು 80ಕ್ಕೂ ಹೆಚ್ಚು ಜನ ವಿಕಲಚೇತನರು ಹಾಗೂ ಅವರ ಹಾರೈಕೆದಾರರು ಭಾಗವಹಿಸಿದ್ದರು.