ಬಿಜೆಪಿ ಶಾಸಕ ಸುರೇಶ್ ಗೌಡರ ಆಪ್ತನಿಂದ ಕೋಟ್ಯಾಂತರ ರೂ ಬೆಲೆ ಬಾಳುವ ಸರ್ಕಾರಿ ಆಸ್ತಿ ಗುಳಂ: ಸರ್ಕಾರಿ ಆಸ್ತಿ ರಕ್ಷಿಸದ ಜಿಲ್ಲಾಧಿಕಾರಿ ವಿರುದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು. - Vidyaranjaka

ಬಿಜೆಪಿ ಶಾಸಕ ಸುರೇಶ್ ಗೌಡರ ಆಪ್ತನಿಂದ ಕೋಟ್ಯಾಂತರ ರೂ ಬೆಲೆ ಬಾಳುವ ಸರ್ಕಾರಿ ಆಸ್ತಿ ಗುಳಂ: ಸರ್ಕಾರಿ ಆಸ್ತಿ ರಕ್ಷಿಸದ ಜಿಲ್ಲಾಧಿಕಾರಿ ವಿರುದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು.

ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ ಗೌಡರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಯಲ್ಲಾಪುರದ ಬಿಜೆಪಿ ಮುಖಂಡ ವೈ ಡಿ ಸಿದ್ದರಾಜು ಕೋಟ್ಯಾಂತರ ರೂ ಬೆಲೆ ಬಾಳುವ ಸರ್ಕಾರಿ ‘ಬ’ ಖರಾಬು ಕಬಳಿಸಿರುವ ಆರೋಪ ಕೇಳಿ ಬಂದಿದೆ.

 

 

 

 

 

 

ಯಲ್ಲಾಪುರ ಗ್ರಾಮದ ಸ.ನಂ.31 ರಲ್ಲಿ 8 ಎಕರೆ 13 ಗುಂಟೆ ಪೈಕಿ 3 ಎಕರೆ 13 ಗಂಟೆ ಜಮೀನು ಸರ್ಕಾರಿ ಹಳ್ಳ,ಕೊರಕಲು ‘ಬ’ ಕರಾಬು ಜಮೀನಾಗಿದೆ,2014 ರಲ್ಲಿ ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಮಾಡುವ ವೇಳೆ ಯಲ್ಲಾಪುರ ಗ್ರಾಮದ ವೈ ಡಿ ಸಿದ್ದರಾಜು ಎಂಬುವವರು ನಕಲಿ ದಾಖಲೆ ಸೃಷ್ಟಿಸಿ ‘ಅ’ ಖರಾಬು ಜಮೀನೆಂದು ತಿದ್ದುಪಡಿಮಾಡಿಸಿದ್ದಾರೆ, ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿಗಳ ಕಟ್ಟಡ ಬೆಂಗಳೂರು ರವರ ಸುತ್ತೋಲೆ ಸಂ: ಆರ್.ಡಿ20 ಎಲ್.ಜಿ.ಪಿ 2020 ರ ದಿನಾಂಕ 20-01-2020 ರಂದು ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಲು, ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿರುವ ಸದರಿ ಸುತ್ತೋಲೆಯನ್ನು ತುಮಕೂರು ಜಿಲ್ಲಾಧಿಕಾರಿಗಳು ಉಲ್ಲಂಘಿಸಿರುವುದರಿಂದ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತುಮಕೂರು ಜಿಲ್ಲಾಧಿಕಾರಿಗಳ ಮೇಲೆ ಶಿಸ್ತು ಕ್ರಮ.ಜರುಗಿಸಬೇಕು ಮತ್ತು ಸರ್ಕಾರದ 3 ಎಕರೆ 13 ಗುಂಟೆ ಸರ್ಕಾರಿ ಖರಾಬು ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಆದೇಶ ಮಾಡಬೇಕೆಂದು ಒತ್ತಾಯಿಸಿ ಮಾಹಿತಿ ಹಕ್ಕು ಹೋರಾಟಗಾರ ನಾರಾಯಣಾಚಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!