ಆದಿಶಕ್ತಿ ಶ್ರೀ ಕೊಲ್ಲಾಪುರದಮ್ಮ ದೇವಿಯ 6ನೇ ವರ್ಷದ ಅದ್ದೂರಿ ಜಾತ್ರಾ ಮಹೋತ್ಸವ - Vidyaranjaka

ಆದಿಶಕ್ತಿ ಶ್ರೀ ಕೊಲ್ಲಾಪುರದಮ್ಮ ದೇವಿಯ 6ನೇ ವರ್ಷದ ಅದ್ದೂರಿ ಜಾತ್ರಾ ಮಹೋತ್ಸವ

 

ಗುಬ್ಬಿ:-ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದ ಶ್ರೀರಾಮನಗರ ಬಡಾವಣೆಯಲ್ಲಿನ ಆದಿಶಕ್ತಿ ಶ್ರೀ ಕೊಲ್ಲಾಪುರದಮ್ಮ ದೇವಿಯ 6ನೇ ವರ್ಷದ ಅದ್ದೂರಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗಿತು.

 

 

ಈ ಜಾತ್ರೆಗೆ ದೂರದ ಊರುಗಳಿಂದ ಸಂಬಂಧಿಕರು ಮದುವೆಯಾದ ನವ ಜೋಡಿಗಳು ಬಂದು ಹರಕೆ ಕಟ್ಟಿಕೊಳ್ಳುವ ಸಾಂಪ್ರದಾಯ ರೂಡಿಯಲ್ಲಿದೆ. ದೂರದ ಊರುಗಳಿಂದ ಬಂದ ಪ್ರಸಾದ ವಿನಿಯೋಗ ವ್ಯವಸ್ಥೆ ಏರ್ಪಡಿಸಲಾಗಿತ್ತು.
ದೇವಸ್ಥಾನ ಸಮಿತಿಯ ಉಪಾಧ್ಯಕ್ಷರಾದ ರಾಮಚಂದ್ರ ಅವರು ಮಾತನಾಡಿ, ಈ ಗ್ರಾಮದಲ್ಲಿ ಹೆಚ್ಚು ಶ್ರಮಿಕ ವರ್ಗವು ವಾಸವಿದ್ದು ಯಾವುದೇ ಜಾತಿ ಮತ ಎಂಬ ಭೇದವಿಲ್ಲದೆ ಎಲ್ಲರೂ ಒಮ್ಮತ ಮನಸ್ಸಿನಿಂದ ಜಾತ್ರೆ ನಡೆಸುವುದು ವಿಶೇಷಕರವಾಗಿದೆ. ಎಲ್ಲಾ ಸಮುದಾಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಕ್ಷಾಂತರ ರೂ ವೆಚ್ಚದಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಿದ್ದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ವಿವಿಧ ಚಟುವಟಿಕೆ ಕಾರ್ಯಕ್ರಮಗಳು ನಡೆಯುತ್ತಿವೆ. ದೇವರು ಒಳ್ಳೆಯದನ್ನ ಮಾಡಲಿ, ಆರೋಗ್ಯವನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು…

 

 


ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ತಮ್ಮಯ್ಯ, ಗುತ್ತಿಗೆದಾರರಾದ ನರಸಿಂಹಯ್ಯ ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾಮಣಿ ಶ್ರೀನಿವಾಸ್, ಪಂಚಾಯತಿ ಸದಸ್ಯ ಶ್ರೀನಿವಾಸ್ ಮೂರ್ತಿ, ಎಂ ಆರ್ ಪಿ ಎಲ್ ಪೆಟ್ರೋಲ್ ಬಂಕ್ ಮಾಲೀಕರಾದ ರಘು, ದೇವಸ್ಥಾನ ಸಮಿತಿ ಸದಸ್ಯರಾದ ನಾಗಣ್ಣ ಶೇಖರಪ್ಪ ಶ್ರೀನಿವಾಸ್ ರಾಮಣ್ಣ ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಇದ್ದರು…

(ವರದಿ:- ಸಂತೋಷ್ ಗುಬ್ಬಿ)

 

Leave a Reply

Your email address will not be published. Required fields are marked *

error: Content is protected !!