ಗುಬ್ಬಿ: ಹೋರಾಟ ಹತ್ತಿಕ್ಕೂವ ಕೆಲಸವನ್ನು ತಹಶೀಲ್ದಾರ್ ಮಾಡಿ,144 ಸೆಕ್ಷನ್ ಜಾರಿ ಮಾಡಿ ನಿಷೇಧಜ್ಞೆ ಹೊರಡಿಸಿರುವುದನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಗೋವಿಂದರಾಜು ಹೇಳುದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಲ್ ಕಾಮಗಾರಿಯನ್ನು ಸುಮಾರು ಒಂದುವರೆ ವರ್ಷಗಳ ಕಾಲ ವಿರೋಧ ಸುತ್ತ ಬಂದಿದೆ.
ಸರ್ಕಾರವು ದಬ್ಬಾಳಿಕೆ ಮೂಲಕ 23 ರಂದು ಕೆನಾಲ್ ಕಾಮಗಾರಿಯನ್ನು ಪ್ರಾರಂಭಿಸಿತ್ತು ಅಂದು ಹಲವಾರು ಮುಖಂಡರನ್ನು ಬಂಧಿಸಲಾಯಿತು. ಮೇ.31 ರಂದು ನಡೆಯುವ ಬೃಹತ್ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ನಾವು ನಿಲ್ಲಿಸುವುದಿಲ್ಲ.ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು ಆಗಮಿಸಿ ಪ್ರತಿಭಟನೆ ಮಾಡುತ್ತಾರೆ.ಈ ಬಾರಿ ಪೊಲೀಸ್ ಬಂಧಿಸಿದ್ದರು ಎಲ್ಲರನ್ನು ಬಂಧಿಸಲಿ ನೋಡೋಣ.
ತಾಲೂಕು ದಂಡಾಧಿಕಾರಿಗಳು ತಮ್ಮ ಆದೇಶ ಪತ್ರದಲ್ಲಿ ಅಕ್ರಮಕೂಟ ಎಂದು ಪದ ಬಳಸಿರುವುದು ಅಕ್ಷಮ ಅಪರಾಧ. ಆ ಪದ ಬಳಸಿ ಇರುವುದಕ್ಕೆ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. ನಮ್ಮ ನೀರಿನ ರಕ್ಷಣೆ ನಮ್ಮ ಹೊಣೆ, ಸರ್ಕಾರದ ಗಮನ ಸೆಳೆಯುವ ದೃಷ್ಟಿಯಿಂದ ನಾವು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಯಾರು ರಕ್ಷಣೆ ಮಾಡಬೇಕಿತ್ತು, ಅವರು ರಕ್ಷಣೆ ಮಾಡುತ್ತಿಲ್ಲ ಮಂತ್ರಿಗಳು ಶಾಸಕರು ನಮ್ಮ ಜಿಲ್ಲೆಯ ನೀರನ್ನು ರಕ್ಷಣೆ ಮಾಡಬೇಕು. ಕುಣಿಗಲ್ ಶಾಸಕರ ರಂಗನಾಥ್ ಬಂದು ಸ್ಥಳ ಪರೀಸಿಲನೆ ಮಾಡಿದ್ದಾರೆ.ಕುಣಿಗಲ್ ಗೆ ಹೋಗುವ ನೀರು ಸಮರ್ಪಕವಾಗಿ ಹೋಗುತ್ತದೆ ಆದರೆ ಮಾಗಡಿಗೆ ಲಿಂಕ್ ಕೆನಾಲ್ ಮೂಲಕ ತೆಗೆದುಕೊಂಡು ಹೋಗಲು ನಾವು ಬಿಡುವುದಿಲ್ಲ ಎಂದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಹೇಮಾವತಿ ಲಿಂಕ್ ಕೆನಾಲ್ ವಿಚಾರವಾಗಿ ಸುಂಕಪುರದ ಹತ್ತಿರ ಬೃಹತ್ ಪ್ರತಿಭಟನೆ ಮಾಡುತ್ತೇವೆ.
ಸರ್ಕಾರದ ಗೊಡ್ಡು ಬೆದರಿಕೆಗೆ ನಾವು ಎದುರುವುದಿಲ್ಲ.ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ.ಪೋಲೀಸರು ರೈತರನ್ನು ಹಾಗೂ ಮುಖಂಡರನ್ನು ಒಂದು ವೇಳೆ ಅರೆಸ್ವ್ ಮಾಡುದ್ರೆ ರಾಷ್ವ್ರಿಯ ಹೆದ್ದಾರಿ ರಸ್ತೆಯಲ್ಲಿ ರೈತರು ಪ್ರತಿಭಟನೆ ಮಾಡುಲು ಸಿದ್ದರಾಗಬೇಕು.ಎಲ್ಲಾ ಶಾಸಕರು ಮಠಾಧೀಶರು ಸಹಾಕಾರ ನೀಡುತ್ತಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಬಾಬು ಮಾತನಾಡಿ,ದಂಡಾಧಿಕಾರಿಗಳು ಅಕ್ರಮಕೂಟ ಎಂದು ಪದ ಬಳಕೆ ಮಾಡಿರುವುದು ಸೂಕ್ತವಲ್ಲ. ತಾಲ್ಲೂಕು ಆಡಳಿತ ಈ ಪದ ಬಳಕೆ ಮಾಡಿರುವುದು ನಾಚಿಕೆ ಕೆಡು.ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಲ್ಲ.ಎಲ್ಲಾ ಸಂಘ ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಬೇಕು.ಕೆನಾಲ್ ಮೂಲಕ ಕುಣಿಗಲ್ ಭಾಗಕ್ಕೆ ನೀರು ತಗೆದುಕೊಂಡು ಹೋಗಲು ಯಾವುದೇ ತೊಂದರೆ ಇಲ್ಲ ಎಂದರು.
ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ತಾಲ್ಲೂಕಿನಲ್ಲಿ ಜೀವ ನಾಡಿ ಹೇಮಾವತಿ ನೀರು.ಶಾಸಕರು ತಾಲ್ಲೂಕು ಆಡಳಿತವನ್ನು ಕೈಗೊಂಬೆ ಮಾಡಿಕೊಂಡು, ತಾನು ಹೇಳಿದಂತೆ ಮಾಡುವುದಾಗಿ ಮಾಡಿಕೊಂಡಿದ್ದಾರೆ. ವಕೀಲರ ಸಂಘದ ಕಾರ್ಯದರ್ಶಿ ಮಾತನಾಡಿ, ಸಂವಿಧಾನದ ಅಸಂಬದ್ದ 144 ಸೆಕ್ಸನ್ ಜಾರಿ ಮಾಡಿರುವುದು ರೈತರ ಹಾಗೂ ತಾಲ್ಲೂಕಿನ ಜನತೆಯ ಹಿತಕಾಯುವ ದಂಡಾಧಿಕಾರಿಗಳ ಸರ್ಕಾರದ ಕೈಕೊಂಬೆಯಾಗಿದ್ದಾರೆ ವಕೀಲರ ಸಂಘದಿಂದ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿದೆ.
ಇದೇ ಸಂಧರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ಹೆಚ್.ಟಿ.ಭೈರಪ್ಪ , ಬ್ಯಾಟ್ ರಂಗೇಗೌಡ,ಚನ್ನಶೆಟ್ಟಿಹಳ್ಳಿ ಯತೀಶ್ ಕುಮಾರ್,ಹರಿವೇಸಂದ್ರ ಲೋಕೇಶ್,ಬೆಣಚಿಗೆರೆ ಪಂಚಾಕ್ಷರಿ, ವರ್ತಕರ ಸಂಘದ ಅಧ್ಯಕ್ಷ ದಯಾನಂದ , ಶಂಕರ್ ಕುಮಾರ್, ಹಾಗೂ ರೈತ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ಗುಬ್ಬಿ ಭರತ್