ಹಿಂದುಳಿದಿರುವ ಸಮಾಜಗಳಲ್ಲಿ ಉಪಾರ ಭಗೀರಥ ಸಮಾಜವು ಒಂದಾಗಿದ್ದು, ಸಮಾಜದ ಮುನ್ನಡೆಗೆ ಬರಬೇಕಾದರೆ ನಮ್ಮ ಸಮುದಾಯದಲ್ಲಿನ ಎಲ್ಲರೂ ಶಿಕ್ಷಣವನ್ನ ಪಡೆಯಬೇಕು ಎಂದು ಜಿಲ್ಲಾ ಉಪ್ಪಾರ ಭಗೀರಥ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ್ ಕರೆ ನೀಡಿದರು.
ಗುಬ್ಬಿ ತಾಲೂಕಿನ ಕಸಬಾ ಹೋಬಳಿ ಕಿಟ್ಟದಕುಪ್ಪೆ ಗ್ರಾಮದಲ್ಲಿ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಬೇಕಾದರೆ ಮೊದಲು ನಾವೆಲ್ಲ ಒಗ್ಗಟ್ಟಿನಿಂದ ಕೂಡಿರಬೇಕು.ನಮ್ಮ ಸಮುದಾಯದ ಏಳಿಗೆಯ ಬಗ್ಗೆ ದಿನದಲ್ಲಿ ಒಮ್ಮೆ ಒಂದೆಡೆ ಸಭೆ ಸೇರಿ ನಮ್ಮ ತಮ್ಮ ಆಲೋಚನೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರ ಮೂಲಕ ಸಮುದಾಯದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ರವೀಶ್ ಮಾತನಾಡಿ ಈ ರೀತಿಯ ಸಮಾಜದ ಮಹನೀಯರ ಜಯಂತಿ ಹಬ್ಬವನ್ನು ಆಚರಿಸುವ ಮೂಲಕ ನಾವೆಲ್ಲಾ ಒಗ್ಗಟ್ಟಾಗಿರುವುದು ಸಂತಸವೆನಿಸಿದೆ. ಇನ್ನೂ ಗ್ರಾಮೀಣ ಭಾಗಗಳಲ್ಲಿ ನಮ್ಮ ಸಮುದಾಯವು ಕೃಷಿಯ ಕೆಲಸವನ್ನು ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದು ಪ್ರಸ್ತುತ ಆಧುನಿಕ ಜಗತ್ತಿನ ಪೈಪೋಟಿಯನ್ನು ಎದುರಿಸಲು ನಾವು ನಮ್ಮ ಸಮುದಾಯದ ಮುಂದಿನ ಪೀಳಿಗೆಯ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಕೊಡಿಸಬೇಕಿದೆ ಎಂದರು.
ಟ್ರ್ಯಾಕ್ಟರ್ ನಲ್ಲಿ ಭಗಿರಥ ಮಹರ್ಷಿಯ ಭಾವಚಿತ್ರವನ್ನು ಇರಿಸಿ ಹೂವಿನ ಅಲಂಕಾರದೊಂದಿಗೆ ಸಿಂಗರಿಸಿ ಊರಿನ ಪ್ರಮುಖ ಬೀದಿಯಲ್ಲಿ ಪಟಾಕಿ ಸಿಡಿಸಿ ವಾದ್ಯಗೋಷ್ಠಿಯಿಂದ ಮೆರವಣಿಗೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪ್ಪಾರ ಭಗೀರಥ ಸಂಘದ ಅಧ್ಯಕ್ಷ ಜಗದೀಶ್,ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಬಾಲಾಜಿ, ಜಿಲ್ಲಾ ಉಪಾಧ್ಯಕ್ಷ ರೇಣುಕಯ್ಯ,ಡಾಕ್ಟರ್ ನಾಗೇಶ್,ಜಿಲ್ಲಾ ಕಾರ್ಯದರ್ಶಿ ನಾಗರಾಜು,ಸತೀಶ್,ಬಸವರಾಜು, ರವೀಶ್, ರುದ್ರೇಶ್, ಷಣ್ಮುಖ,ಮುರಳಿಧರ, ಭೈರಣ್ಣ, ಅಣ್ಣಯ್ಯಪ್ಪ, ನರಸಿಂಹರಾಜು, ಲಕ್ಷ್ಮಿಪತಿ, ನಟರಾಜು ಸೇರಿದಂತೆ ಕಿಟ್ಟದಕುಪ್ಪೆ ಗ್ರಾಮಸ್ಥರು ಹಾಗೂ ಸಮಾಜದ ಬಂಧುಗಳು ಹಾಜರಿದ್ದರು.
ವರದಿ : ಗುಬ್ಬಿ ಭರತ್