ಅಪರೂಪದ ಗೂಬೆ ಮರಿಗಳ ರಕ್ಷಣೆ

ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜ್ ಆವರಣದಲ್ಲಿ ಅನಾಥವಾಗಿದ್ದ 5 ಗೂಬೆ ಮರಿಗಳನ್ನು ರಕ್ಷಿಸಲಾಗಿದೆ.

 

 

 

 

 

 

 

ಕಾಲೇಜು ಆವರಣದಲ್ಲಿ ಗೂಬೆ ಮರಿಗಳನ್ನು ಕಂಡ ಡಾ. ಮಾಂತೇಶ್ ಕೂಡಲೇ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಗೆ (ವಾರ್ಕೊ) ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಂಸ್ಥೆಯ ಉರಗ ಸಂರಕ್ಷಕರಾದ ಮನು ಅಗ್ನಿವಂಶಿ ಮತ್ತು ಚೇತನ್ ಅಪರೂಪದ 5 ಬಾರ್ನ್ ಔಲ್ ಜಾತಿಯ (ಕಣಜದ ಗೂಬೆ) ಗೂಬೆ ಮರಿಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ವೇಳೆ ಮಾತನಾಡಿದ ಉರಗ ಸಂರಕ್ಷಕ ಮನು ಅಗ್ನಿವಂಶಿ  5 ಮರಿಗಳನ್ನು ವಲಯ ಅರಣ್ಯಾಧಿಕಾರಿ ನಮಿತಾ ರವರ ಅನುಮತಿ ಪಡೆದು ಬೆಂಗಳೂರಿನ ಪೀಪಲ್ ಫಾರ್ ಅನಿಮಲ್ಸ್ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.

 

 

ಹಾವುಗಳು ಹಾಗೂ ಇತರೆ ವನ್ಯಜೀವಿ ರಕ್ಷಣೆ ಮಾಡಲು ವಾರ್ಕೊ ಸಂಸ್ಥೆಗೆ 9964519576 ಕರೆಮಾಡಬಹುದು.

Leave a Reply

Your email address will not be published. Required fields are marked *

error: Content is protected !!