ತುಮಕೂರು ಎ.ಸಿ. ಗೌರವ್ ಕುಮಾರ್ ಶೆಟ್ಟಿ ನಮಗೆ ಬೇಕಿಲ್ಲ ; ಮಧೂಸೂದನ್

ತುಮಕೂರು : ಜಿಲ್ಲೆ ಕಂಡು ಕೇಳರಿಯದ ಭ್ರಷ್ಟ,ಸೋಂಬೇರಿ ಉಪವಿಭಾಗಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜನರ ಸಮಸ್ಯೆ ಗೊತ್ತಿಲ್ಲ,ಕೆಲಸವೂ ಗೊತ್ತಿಲ್ಲ ,ಸೋಮಾರಿ ಸೋಂಭೇರಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿಯನ್ನು ತುಮಕೂರಿನಿಂದ ಎತ್ತಂಗಡಿ ಮಾಡುವಂತೆ ಒತ್ತಾಯಿಸಿದರು.

 

 

 

 

 

ನವಂಬರ್ ತಿಂಗಳಿಂದ ಇಲ್ಲಿಯವರೆಗೂ ಒಂದು ಫೈಲ್ ಆದೇಶವಾಗಿಲ್ಲ ನಿಮಗೆ ಕಪ್ಪ ಕಾಣಿಕೆ ಕೊಟ್ಟು ಸರಿಮಾಡಿಕೊಳ್ಳಬೇಕಾ,ಒಂದು ಸಣ್ಣ ಪುಟ್ಟ ತಿದ್ದುಪಡಿಗೂ ರೈತರು ಅಲೆದಾಡುವಂತಾಗಿದೆ,ಜಾಸ್ತಿ ಮಾತನಾಡಿದರೆ ಕೇಸು ವಜಾಮಾಡುತ್ತಾರೆ,ಇಲ್ಲವಾದರೆ ಡಿಸಿ ಗೆ ಅಥವಾ ತಹಶೀಲ್ದಾರ್ ಗೆ ಕೇಸು ವರ್ಗಾಯಿಸುತ್ತಾರೆ,ನಿಮ್ಮಂತ ಸೋಂಭೇರಿ ಎಸಿ ನಮಗೆ ಬೇಡ,ನಕಮಗೆ ಸಾಧ್ಯವಾದರೆ ಕೆಲಸ ಮಾಡಿ ಇಲ್ಲವಾದರೆ ವಯೋ ನಿವೃತ್ತಿ ಪಡೆದು ಜಾಗ ಖಾಲಿ ಮಾಡಿ ಎಂದು AAP ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಆಗ್ರಹಿಸಿದ್ದಾರೆ.

 

 

 

 

 

ಈ ಹಿಂದೆ ಇದೇ ಗೌರವ್ ಕುಮಾರ್ ಶೆಟ್ಟಿರವರು ಕರೆಂಟ್ ಹೋದಂತಹ ಸಂದರ್ಭದಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ಕೆಲಸ ನಿರ್ವಹಿಸಿ, ದೊಡ್ಡ ಸುದ್ಧಿಗೂ ಸಹ ಇವರು ಸಾಕ್ಷಿಯಾಗಿದ್ದರು, ಆದರೆ ಇಂತಹ ನಿಷ್ಠಾವಂತ ಅಧಿಕಾರಿಯ ವಿರುದ್ಧ ಎಎಪಿ ಆರೋಪಿಸಿದೆ, ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪತ್ತದೆಯೋ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!