ಸಿದ್ಧರಾಮಯ್ಯ ಸರ್ಕಾರದ ಪ್ರಮಾಣ ವಚನ ಕಾರ್ಯಕಮ ಪ್ರಯುಕ್ತ ಸಿಹಿ ಹಂಚುವುದರೊಂದಿಗೆ ಸಂಭ್ರಮಿಸಿದ ಅಟ್ಟಿಕಾ ಬಾಬು ಅಭಿಮಾನಿಗಳು

ತುಮಕೂರು : ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನಲೆಯಲ್ಲಿ ಕಾಂಗ್ರೆಸ್‌ ಪಕ್ಷ ಬಹು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಇಂದು ಸಿದ್ಧರಾಮಯ್ಯರವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಪಡೆಯುವ ಶುಭ ಸಂದರ್ಭದಲ್ಲಿ ತುಮಕೂರು ನಗರದ ಟೌನ್‌ ಹಾಲ್‌ ವೃತ್ತದಲ್ಲಿ ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು ಅವರ ಅಪಾರ ಅಭಿಮಾನಿ ಬಳಗದ ವತಿಯಿಂದ ಸಂಭ್ರಮಾಚರಣೆಯನ್ನು ನಡೆಸಿದರು.

 

 

 

 

ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ನಗರದ ಟೌನ್‌ ಹಾಲ್‌ (ಬಿ.ಜಿ.ಎಸ್.‌ ವೃತ್ತ)ದ ಪಾಲಿಕೆ ಆವರಣದಲ್ಲಿ ದೊಡ್ಡ ಎಲ್.ಇ.ಡಿ. ಸ್ಕ್ರೀನ್‌ ಮೂಲಕ ಪ್ರಮಾಣ ವಚನ ಕಾರ್ಯಕ್ರಮವನ್ನು ಜನರು ನೋಡುವಂತೆ ವ್ಯವಸ್ಥೆಯನ್ನು ಮಾಡಲಾಗಿತ್ತು, ಅದರೊಂದಿಗೆ ಟೌನ್‌ ಹಾಲ್‌ ವೃತ್ತದಲ್ಲಿ ಬೊಮ್ಮನಹಳ್ಳಿ ಬಾಬು @ ಅಟ್ಟಿಕಾ ಬಾಬು ಅಭಿಮಾನಿ ಬಳಗದಿಂದ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

 

 

 

 

ಈ ಸಂದರ್ಭದಲ್ಲಿ ಮಾತನಾಡಿದ ನಾಸೀರ್‌ ಅವರು ಈ ಭಾರಿ ಜನಾದೇಶ ಕಾಂಗ್ರೆಸ್‌ ಪಕ್ಷಕ್ಕೆ ನೀಡಿದ್ದು, ಜನರು ಸುಳ್ಳು ಭರವಸೆಗಳನ್ನು ಗಾಳಿಗೆ ತೂರಿ ಕಾಂಗ್ರೆಸ್‌ ಪಕ್ಷ ಹೇಳಿದ್ದ ಗ್ಯಾರಂಟಿಗಳಿಗೆ ಮಣೆ ಹಾಕಿದೆ, ಅದರಂತೆ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯರವರು, ಉಪ ಮುಖ್ಯಮಂತ್ರಿಗಳಾಗಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಪರಮೇಶ್ವರ, ಮುನಿಯಪ್ಪ, ಪ್ರಿಯಾಂಕ್‌ ಖರ್ಗೆ, ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್‌, ಜಮೀರ್‌ ಅಹಮ್ಮದ್‌, ಸತೀಶ್‌ ಜಾರಕಿಹೊಳಿ, ಎಂ.ಬಿ.ಪಾಟೀಲ್‌ ಇವರುಗಳು ಮಂತ್ರಿಗಳಾಗಿ ಪ್ರಮಾಣ ವಚನವನ್ನು ಸ್ವೀಕರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಅಟ್ಟಿಕಾ ಬಾಬು ಅಭಿಮಾನಿಗಳಾದ ನಾವುಗಳು ನಮ್ಮ ಸಂತಸವನ್ನು ಜನರೊಂದಿಗೆ ಈ ರೀತಿಯಾಗಿ ಸಿಹಿ ಹಂಚುವುದರೊಂದಿಗೆ ಸಂಭ್ರಮವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ಹೇಳಿದರು.

 

 

 

ಈ ಸಂದರ್ಭದಲ್ಲಿ ಅಟ್ಟಿಕಾ ಬಾಬು ಅಭಿಮಾನಿಗಳಾದ ಮಂಜುನಾಥ್‌ (ಉಪ್ಪಾರಹಳ್ಳಿ), ಸಾಧಿಕ್‌, ನಾಸೀರ್‌ ಸೇರಿದಂತೆ ಹಲವಾರು ಅಭಿಮಾನಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!