ತುಮಕೂರು ನಗರ ಕ್ಷೇತ್ರದಿಂದ ಯಶಸ್ವಿ ಉದ್ಯಮಿ ಎನ್ .ಎಸ್ ಜಯಕುಮಾರ್ ಸ್ಪರ್ದೆ?

 

ತುಮಕೂರು : ನಗರದಲ್ಲಿ ಸಹಕಾರ ಕ್ಷೇತ್ರದಿಂದ ಅತ್ಯುತ್ತಮ ಸಾಧನೆಗೈದ ಹಾಗೂ ಯಶಸ್ವಿ ಉದ್ಯಮಿ ಎನ್.ಎಸ್ ಜಯಕುಮಾರ್ ಅವರು ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದ್ದಿಲ್ಲದೆ ಜನಸೇವೆ ಮಾಡುತ್ತಿದ್ದರು.

 

 

ನಗರದ ಜನರಿಗೆ ಉತ್ತಮ ಜನಸೇವೆ ಮಾಡಲು 2023ರ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.ಬಿಜೆಪಿ ಪಕ್ಷಕ್ಕೆ ಹಾಗೂ ತುಮಕೂರು ನಗರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವ ಮೂಲಕ ಜನರ ಅಚ್ಚುಮೆಚ್ಚಿನ ಜಯಕುಮಾರಣ್ಣ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

 

 

 

ಸಹಕಾರಿ ಕ್ಷೇತ್ರದಲ್ಲಿ ಟಿಎಂಸಿಸಿ ಬ್ಯಾಂಕ್ ಸ್ಥಾಪನೆ ಮಾಡಿ ಗ್ರಾಹಕರ ಮನೆ ಬಾಗಿಲಿಗೆ ಸೇವೆ ನೀಡಿದ್ದಾರೆ. ಗ್ರಾಹಕರ ಅನುಕೂಲಕ್ಕಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಎಟಿಎಂ ಸೇವೆ ನೀಡುವ ಮೂಲಕ ರಾಷ್ಟ್ರೀಯ ಬ್ಯಾಂಕ್ ಗಳಿಗೆ ಸೆಡ್ಡು ಹೊಡೆದ ಕೀರ್ತಿ ಎನ್.ಎಸ್ ಜಯಕುಮಾರ್ ಅವರಿಗೆ ಸಲ್ಲುತ್ತದೆ.

 

 

 

 

ಸಹಕಾರ ಕ್ಷೇತ್ರ ಹಾಗೂ ಉದ್ಯಮದ ಜೊತೆಗೆ ಭಾರತೀಯ ಜನತಾ ಪಾರ್ಟಿ ಪಕ್ಷದಲ್ಲಿ ಗುರುತಿಸಿಕೊಂಡು ಸೇವೆ ಸಲ್ಲಿಸಿರುವ ಎನ್.ಎಸ್ ಜಯಕುಮಾರ್ ಅವರಿಗೆ ಹಲವು ಪ್ರಮುಖ ಅಧಿಕಾರ ಕೈತಪ್ಪಿದವು,ಆದರೂ ಯಾವುದಕ್ಕೂ ಅಂಜದೆ ತನ್ನ ಸೇವೆ ಮುಂದುವರೆಸಿರುವ ಎನ್.ಎಸ್ ಜಯಕುಮಾರ್ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ.

 

 

 

 

ನಗರದಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹಾಗೂ ಹಿತೈಷಿಗಳು ಎನ್.ಎಸ್ ಜಯಕುಮಾರ್ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ತುಮಕೂರು ನಗರದ ಜನರು ಕೈಹಿಡಿಯುವ ಸಾಧ್ಯತೆ ಹೆಚ್ಚಿದೆ.

Leave a Reply

Your email address will not be published. Required fields are marked *

error: Content is protected !!