ತುಮಕೂರಿಗೆ ರೀ ಎಂಟ್ರೀ ಕೊಟ್ಟ ಅಟ್ಟಿಕಾ ಬಾಬು

ತುಮಕೂರು: ತುಮಕೂರು ನಗರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಬೊಮ್ಮನಹಳ್ಳಿ ಬಾಬು ಅವರು ತುಮಕೂರು ನಗರಕ್ಕೆ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ತುಮಕೂರು ನಗರದಲ್ಲಿ ಸ್ಪರ್ಧಿಸುವ ಬಗೆಗಿನ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

IMG_8232

 

 

 

 

 

IMG_8232

 

ಇಂದು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಅವರು, ಸಂಕ್ರಾಂತಿ ಬಳಿಕ ತುಮಕೂರಿನಲ್ಲೇ ಮನೆ ಮಾಡಿ ಕುಟುಂಬದೊಂದಿಗೆ ನಗರದಲ್ಲೇ ವಾಸ್ತವ್ಯ ಹೂಡೋದಾಗಿ ತಿಳಿಸಿದರು. ಇದಲ್ಲದೇ, ಕಾರ್ಯಕರ್ತರು, ಕ್ಷೇತ್ರದ ಜನರ ಕುಂದುಕೊರತೆಗಳನ್ನು ಆಳಿಸುವ ಉದ್ದೇಶದಿಂದ ತುಮಕೂರು ನಗರದ ಪ್ರತಿ ವಾರ್ಡ್ ನಲ್ಲಿ ಮನೆ ಅಥವಾ ಕಚೇರಿ ತೆರೆಯುವುದಾಗಿ ಅವರು ಹೇಳಿದ್ದಾರೆ.

 

 

 

ತುಮಕೂರಿನ ಜನರ ಸಮಸ್ಯೆಗೆ ಆಸರೆಯಾಗುವ ಭರವಸೆ ನೀಡಿರುವ ಬೊಮ್ಮನಹಳ್ಳಿ ಬಾಬು ಅವರು ತಮ್ಮ ಕಾರ್ಯಕರ್ತರು, ಬೆಂಬಲಿಗರಿಗೆ ಈ ಮೂಲಕ ನೆರವಾಗುವ ಭರವಸೆ ನೀಡಿದ್ದಾರೆ. ಇದಲ್ಲದೇ ಕ್ಷೇತ್ರದ ಪ್ರತಿ ಮನೆಗೂ ಭೇಟಿ ನೀಡುವ ಮೂಲಕ ತಮ್ಮ ಪರಿಚಯಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

 

 

 

ಜೆಡಿಎಸ್     ಟಿಕೆಟ್ ಆಕಾಂಕ್ಷಿಯಾಗಿರುವ ಬೊಮ್ಮನಹಳ್ಳಿ ಬಾಬು ಅವರು ಇದೀಗ ತುಮಕೂರಿನಲ್ಲೇ ಸ್ಪರ್ಧಿಸುವ ಸ್ಪಷ್ಟ ಸಂದೇಶವನ್ನು ತನ್ನ ಬೆಂಬಲಿಗರ ಸಭೆ ನಡೆಸುವ ಮೂಲಕ ರವಾನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!