ವಿಷ್ಣುವರ್ಧನ್‌ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಎನ್.ಗೋವಿಂದರಾಜು

ತುಮಕೂರು ನಗರದ ವಿನಾಯಕ ನಗರ ೨ನೇ ಮುಖ್ಯರಸ್ತೆ, ಗಣೇಶ ದೇವಸ್ಥಾನದ ಎದುರು ಡಾ|| ವಿಷ್ಣುಸೇನಾ ಸಮಿತಿ, ತುಮಕೂರು ವತಿಯಿಂದ ಸಾಹಸಸಿಂಹ ಡಾ|| ವಿಷ್ಣುವರ್ಧನ್‌ರವರ 13ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

 

 

 

 

 

ಈ ಸಂದರ್ಭದಲ್ಲಿ ಜೆಡಿಎಸ್ ತುಮಕೂರು ನಗರ ಶಾಸಕ ಅಭ್ಯರ್ಥಿಯಾದ ಎನ್.ಗೋವಿಂದರಾಜುರವರು ಆಗಮಿಸಿ ವಿಷ್ಣುವರ್ಧನ್‌ರವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸುವುದರ ಮೂಲಕ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಈ ಕಾರ್ಯಕ್ರಮದ ಅಂಗವಾಗಿ ಸಾವಿರಾರು ಜನರಿಗೆ ಅನ್ನ ಸಂತರ್ಪಣೆಯನ್ನು ಸಹ ಡಾ|| ವಿಷ್ಣುಸೇನಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಚಿತ್ರದಲ್ಲಿ ಎಲ್.ಕಿರಣ್, ನವೀನ್, ಮಂಜು, ಅಂಜು, ಮೂರ್ತಿ, ಸಚಿನ್, ರಾಘು, ರೋಹಿತ್, ನಾಗೇಶ್ ವಿ.ಬಿ.ತೇಲ್ಕರ್ ಹಾಗೂ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!