ಸಾರ್ವಜನಿಕರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾದ :-ಎಇಇ ಜಲದೇಶ್ - Vidyaranjaka

ಸಾರ್ವಜನಿಕರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾದ :-ಎಇಇ ಜಲದೇಶ್

ಮನೆ ಮಗನಂತೆ ಬೆಳೆದು ನಿಂತಿರುವ ಅಡಿಕೆ ಹಾಗೂ ತೆಂಗಿನ ಮರಗಳು ಬಿರುಗಾಳಿ ಮಳೆಗೆ ನೆಲಕ್ಕೆ ಉರುಳುತ್ತಿದೆ ಹಾಗಾಗಿ ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತು ರೈತರ ಪಾಲಿಗೆ ದೇವರಾಗಬೇಕು.

 

 

ತಾಲೂಕಿನ ನಿಟ್ಟೂರು ಹಾಗೂ ಕಡಬ ಭಾಗಗಳಲ್ಲಿ ಅತಿ ಹೆಚ್ಚು ಗಾಳಿ ಮಳೆಯಿಂದ ರೈತರು ಬೆಳೆದ ಬೆಳೆಗಳು ನಾಶವಾಗಿವೆ ಸ್ಥಳೀಯ ಅಧಿಕಾರಿಗಳು ನೋಂದ ಕುಟುಂಬಕ್ಕ ನೆರವಾಗಿ ಪರಿಹಾರವನ್ನು ನೀಡಬೇಕೆಂದು ನೊಂದ ಕುಟುಂಬ ಕೇಳಿಕೊಳ್ಳುತ್ತಿದೆ.

 

 

 

 

ವಿದ್ಯುತ್ ತಂತಿಯ ಮೇಲೆ ಅಡಿಕೆ ತೆಂಗಿನ ಮರಗಳು ಬೀಳುತ್ತಿದ್ದು. ತುರ್ತು ತೆರವುಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಬೆಸ್ಕಾಂ ಇಲಾಖೆ ನಿರ್ಲಕ್ಷ ತೋರುತ್ತಿದೆ.

 

 

ಅತಿ ವೇಗ-ತಿಥಿ ಬೇಗ ಎಂಬ ಗಾದೆ ಮಾತಿನಂತೆ ರಾತ್ರಿ ವೇಳೆಯಲ್ಲಿ ಬಿರುಗಾಳಿಯ ಆರ್ಭಟಕ್ಕೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು ತಂತಿಯು ಹರಿದು ರಸ್ತೆಗೆ ಬಿದ್ದು ಅಪಘಾತಗಳಿಗೆ ದಾರಿ ಮಾಡಿದಂತಾಗುತ್ತಿದೆ.

 

 

ಮುನ್ನೆಚ್ಚರಿಕೆಯಾಗಿ ವಿದ್ಯುತ್ ತಂತಿಗಳಿಗೆ ತಾಗುತ್ತಿರುವ ಮರದ ಕೊಂಬೆಗಳನ್ನು ಕತ್ತರಿಸಿ ಸಮರ್ಪಕ ವಿದ್ಯುತ್ ನೀಡುವಲ್ಲಿ ಗುಬ್ಬಿ ತಾಲೂಕಿನ ಬೆಸ್ಕಾಂ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ ಎಂದು ನಾಗರಿಕರು ಹಾಗೂ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

 

 

ತಾಲೂಕಿನ ಬೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅಥವಾ (ಎಇಇ)ಅಧಿಕಾರಿಯದ ಜಲದೇಶ್ ರವರು ಸಾರ್ವಜನಿಕರ ಫೋನ್ ಕರೆಯನ್ನು ಸ್ವೀಕರಿಸುವುದಿಲ್ಲ ಹಾಗೂ ಕಚೇರಿಗೆ ಭೇಟಿ ನೀಡಿದೆ ತುಮಕೂರು ಕಚೇರಿಯಲ್ಲಿ ನಿರಂತರ ಸೇವೆಯಲ್ಲಿ ತೊಡಗಿರುತ್ತಾರೆ ಸಾರ್ವಜನಿಕರ ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ರೈತರ ಹಿಡಿಶಾಪ ಹಾಕುತ್ತಿದ್ದಾರೆ.

 

 

ಗುಬ್ಬಿ ಬೆಸ್ಕಾಂ ಕಛೇರಿ ಮತ್ತು ನಿಟ್ಟೂರು ಬೆಸ್ಕಾಂ ಕಚೇರಿಯಲ್ಲಿ ಎರಡು ಎಇಇ ಅಥವಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಹುದ್ದೆ ಖಾಲಿಯಿದ್ದು ಈ ಹುದ್ದೆಗೆ ತುಮಕೂರು ಅಧಿಕಾರಿಯನ್ನು ಪ್ರಭಾರವಾಗಿ ನೇಮಕ ಮಾಡಿದ್ದು ಈ ಅಧಿಕಾರಿ ತುಮಕೂರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ ಗುಬ್ಬಿ ಕಚೇರಿಗೆ ಬಾರದೆ ತಮ್ಮ ಕಚೇರಿಯ ದಾಖಲೆಗಳು ಅಥವಾ ಕಡತಗಳನ್ನು ತಾವು ಇರುವ ಜಾಗಕ್ಕೆ ತರಸಿಕೊಂಡು ಸಹಿ ಮಾಡಲಾಗುತ್ತಿದೆ ಎಂದು ಕೆಲವು ಗುತ್ತಿಗೆದಾರರಿಂದ ಕೇಳಿ ಬರುತ್ತಿದೆ.

 

 

 

ಬೇಸಿಗೆ ಸಮಯದಲ್ಲಿ ವಿದ್ಯುತ್ ಸಮಸ್ಯೆ ಅತಿ ಹೆಚ್ಚು ಕಂಡುಬರುತ್ತದೆ ಮಳೆಗಾಲ ಪ್ರಾರಂಭವಾದ ಸಂದರ್ಭದಲ್ಲಿ ಗಿಡ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಸಮಸ್ಯೆ ಕಂಡುಬರುತ್ತದೆ ಹಾಗಾಗಿ ಅಧಿಕಾರಿಗಳ ಜಾಣ ಮೌನವೇಕೆ… ಇದು ನಾಗರಿಕರ ಪ್ರಶ್ನೆ..? ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ರೈತರು ಮತ್ತು ನಾಗರಿಕರು ಪರದಾಡುವಂತಾಗಿದೆ.

 

ಅಧಿಕಾರಿಗಳು ಕರ್ತವ್ಯ ಲೋಪದಿಂದ ನಾಗರಿಕರಿಗೆ ಪರದಾಡುವಂಥಾಗುತ್ತಿದೆ ಹಾಗಾಗಿ ತಾಲೂಕಿನ ಎಇಇ ಜಲದೇಶ್ ಅವರ ನಿರ್ಲಕ್ಷಕ್ಕೆ ಸಾರ್ವಜನಿಕರು ಕಚೇರಿಗೆ ತಿರುಗಿ-ತಿರುಗಿ ಸುಸ್ತಾಗಿದೆ ಎನ್ನುತ್ತಾರೆ.

“ಹೆಸರು ಹೇಳಲು ಇಚ್ಚಿಸದ ರೈತರು “”

 

 

(ವರದಿ:-ಸಂತೋಷ್ ಗುಬ್ಬಿ)

Leave a Reply

Your email address will not be published. Required fields are marked *

error: Content is protected !!