ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ : ರೈತರಿಂದ ತಹಶೀಲ್ದಾರ್ ಗೆ ಮನವಿ - Vidyaranjaka

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ : ರೈತರಿಂದ ತಹಶೀಲ್ದಾರ್ ಗೆ ಮನವಿ

ಗುಬ್ಬಿ:-ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆರು ತಿಂಗಳ ಮಗುವಿನ ತಂದೆ ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನ ವ್ಯಾಪ್ತಿಯಲ್ಲಿ ಕಂಡುಬಂದಿದೆ. ತಾಲೂಕಿನ ಕಡಬ ಹೋಬಳಿ ಬ್ಯಾಡಿಗೆರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕ ವಿದ್ಯುತ್ ಕಂಬದ ಪಕ್ಕದಲ್ಲಿದ್ದ ಸ್ವಿಚ್ ಇಲ್ಲದೇ ಇರುವ ವೈರ್ ತಗಲಿ ಸ್ಥಳದಲ್ಲೇ ಸಾವನಪ್ಪಿದ್ದಾರೆ ಎನ್ನಲಾಗಿದೆ.

 

 

 

 

ಈ ಕುರಿತಂತೆ ಬೆಸ್ಕಾಂ ಇಲಾಖೆ ಅಧಿಕಾರಿಗಳು ವಿದ್ಯುತ್ ಕಂಬಕ್ಕೆ ಸ್ವಿಚ್ ಬೋರ್ಡ್ ಅಳವಡಿಸದೆ ಇರುವ ಕಾರಣ ಈ ಸಾವು ನೋವುಗಳು ಕಂಡುಬರುತ್ತಿವೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ತಾಲೂಕಿನ ರೈತ ಸಂಘ ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತು ಮಂಗಳವಾರ ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಜೊತೆಗೆ ಸರ್ಕಾರಿ ನೌಕರಿಯನ್ನು ನೀಡಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಗಿದೆ.

 

 

 

 

 

 

 

ಕಣ್ಮುಚ್ಚಿ ಕುಳಿತಿರುವ ಬೆಸ್ಕಾಂ ಇಲಾಖೆ ಅಧಿಕಾರಿಗಳನ್ನು ತಟ್ಟಿ ಎಚ್ಚರಿಕೆ ಮಾಡುವ ಸ್ಥಿತಿ ಬಂದೊದಗಿದೆ ಹಾಗಾಗಿ ಉನ್ನತ ಮಟ್ಟದ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿ ತಾಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಮೈಮರೆತು ಕುಳಿತಂತ ಅಧಿಕಾರಿಗಳನ್ನು ಚುರುಕು ಮಾಡಬೇಕೆಂದು ರೈತ ಸಂಘ ಒತ್ತಾಯಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬೀದಿ ದೀಪದ ವ್ಯವಸ್ಥೆಯನ್ನು ನೋಡಿಕೊಳ್ಳಬೇಕು ಹಾಗೂ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಸ್ವಿಚ್ ಗಳನ್ನು ಸರಿಪಡಿಸಲು ಮುಂದಾಗಬೇಕು ಎಂದರು.

 

 

 

 

 

 

ಇದೇ ಸಂದರ್ಭದಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿಜಿ ಲೋಕೇಶ್ ಚಿಕ್ಕೋನಹಳ್ಳಿ.ಯತೀಶ್. ಬಸವರಾಜು. ಸುರೇಶ್ ಮಾದೇವಯ್ಯ. ಜಗದೀಶಪ್ಪ ತಮ್ಮಯಣ್ಣ. ಕೆ ಎಸ್ ಬಸವರಾಜು. ಜಗದೀಶ್.ಸಣ್ಣಪ್ಪ.ಕೋಣೆ ಮುದ್ದೇನಹಳ್ಳಿ ರೈತ ಮುಖಂಡರು ಭಾಗವಹಿಸಿದ್ದರು.

(ವರದಿ:-ಸಂತೋಷ್ ಗುಬ್ಬಿ)

Leave a Reply

Your email address will not be published. Required fields are marked *

error: Content is protected !!